ಕಂಪ್ಲಿ: ಪಟ್ಟಣದ ಮೇಲ್ಗಡೆಪೇಟೆಯ ಶ್ರೀ ಬನಶಂಕರಿದೇವಿ ಗಂಗೆಸ್ಥಳ ಮೆರವಣಿಗೆ ಶುಕ್ರವಾರ ಶ್ರದ್ಧಾಭಕ್ತಿಯಿಂದ ಜರುಗಿತು. ತುಂಗಭದ್ರಾ ನದಿಯಿಂದ ಆರಂಭಗೊಂಡ ಮೆರವಣಿಗೆಯಲ್ಲಿ ವಾದ್ಯಮೇಳಗಳು ಪಾಲ್ಗೊಂಡಿದ್ದವು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೆ.ವಿರುಪಣ್ಣ, ಅರ್ಚಕರಾದ ಮಿಟ್ಟಿ ಶಂಕರ್, ಓದಾ ಬಸವರಾಜ್, ಸದ್ಭಕ್ತರಾದ ಎಂ.ಶಂಕರ್, ಟಿ.ನಾಗರಾಜ, ಜೆ.ಎಂ. ಸಿದ್ದಯ್ಯಸ್ವಾಮಿ, ಎಂ.ನಾಗರಾಜ, ಕನಕ, ಅಂಬಾಡೆ ನಾಗರಾಜ, ಎಂ.ಸಿದ್ರಾಮ, ಕೆ.ಶಿವಕುಮಾರ್, ಬಿ.ಬಸವರಾಜ್, ಮಲ್ಲಿಕಾರ್ಜುನ ಮತ್ತಿತರರು ಪಾಲ್ಗೊಂಡಿದ್ದರು.