More

    ಮಧ್ಯಪ್ರದೇಶ ವಿಪಕ್ಷ ನಾಯಕ ಸ್ಥಾನಕ್ಕೆ ಕಮಲನಾಥ್​ ಪದತ್ಯಾಗ: ಚುನಾವಣೆಗಾಗಿ ಕಾಂಗ್ರೆಸ್​​ ಪೂರ್ವ ತಯಾರಿ

    ಭೋಪಾಲ್​: ಮಧ್ಯ ಪ್ರದೇಶದ ವಿಧಾನಸಭಾ ವಿಪಕ್ಷ ನಾಯಕ ಸ್ಥಾನಕ್ಕೆ ಕಮಲ್​ನಾಥ್​ ರಾಜೀನಾಮೆ ನೀಡಿದ್ದು, ಈ ಮೂಲಕ ಕಾಂಗ್ರೆಸ್​ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

    ವಿಪಕ್ಷ ನಾಯಕ ಸ್ಥಾನಕ್ಕೆ ಭಾನುವಾರವೇ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯನ್ನು ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಗುರುವಾರ ಸ್ವೀಕರಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​ ತಿಳಿಸಿದ್ದಾರೆ.

    ಈ ಸ್ಥಾನಕ್ಕೆ ಗೋವಿಂದ್​ ಸಿಂಗ್​ ಎಂಬುವವರನ್ನು ನೇಮಿಸಲಾಗಿದ್ದು, ಕಮಲ್​ ನಾಥ್​ ಅವರು ರಾಜ್ಯಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ.

    ಕಮಲನಾಥ್​ ಪದತ್ಯಾಗಕ್ಕೆ ಸೂಕ್ತ ಕಾರಣ ನೀಡದ ಕಾಂಗ್ರೆಸ್​ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್​ನಲ್ಲಿ ಈ ಬದಲಾವಣೆ ತರಲಾಗಿದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts