More

    ನ್ಯಾಯಾಧೀಶರ ವರ್ಗಾವಣೆ

    ಬೆಳಗಾವಿ: ರಾಜ್ಯದ ಹಲವು ಜಿಲ್ಲೆಗಳ ವಿವಿಧ ನ್ಯಾಯಾಲಯಗಳ ಸಿವಿಲ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಜೂ.1ರಂದು ಅನ್ವಯಿಸುವಂತೆ ಹೈಕೋರ್ಟ್‌ನ ರಿಜಿಸ್ಟರ್ ಜನರಲ್ ರಾಜೇಂದ್ರ ಬದಾಮಿಕರ್ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

    ಬೆಳಗಾವಿಯ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾರಾಣಿ ಬಾಬಯ್ಯ ಹಿರೇಮಠ ಅವರನ್ನು ಕಲಬುರ್ಗಿಯ ಜಿಲ್ಲಾ ನ್ಯಾಯಾಲಯಕ್ಕೆ ಹಾಗೂ ತೆರವಾದ ಅವರ ಸ್ಥಾನಕ್ಕೆ 2ನೇ ಹೆಚ್ಚುವರಿ ನ್ಯಾಯಾಲಯದ ಶ್ರೀಧರಗೋಪಾಲಕೃಷ್ಣ ಭಟ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರ ಸ್ಥಾನಕ್ಕೆ 3ನೇ ಹೆಚ್ಚುವರಿ ನ್ಯಾಯಾಲಯದ ಪರಶುರಾಮ ಫಕೀರಪ್ಪ ದೊಡಮನಿ ಅವರನ್ನು ಹಾಗೂ ಅವರಿಂದ ತೆರವಾದ ಸ್ಥಾನಕ್ಕೆ 4ನೇ ಹೆಚ್ಚುವರಿ ನ್ಯಾಯಾಲಯದ ಕೆ.ಲಕ್ಷ್ಮೀ ಅವರನ್ನು ವರ್ಗಾವಣೆ ಮಾಡಲಾಗಿದೆ.

    ಸವದತ್ತಿಯ ಪಿ.ಆರ್. ಯೋಗೇಶ ಅವರನ್ನು ಬೆಂಗಳೂರು ಗ್ರಾಮಾಂತರ 4ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಗೂ ಬೆಳಗಾವಿಯ ಸಿವಿಲ್ ನ್ಯಾಯಾಧೀಶ ದೇವರಾಜ ಭೂಟೆ ಅವರನ್ನು ಮೈಸೂರಿನ 4ನೇ ಹೆಚ್ಚುವರಿ ನ್ಯಾಯಾಲಯಕ್ಕೆ, ಬೈಲಹೊಂಗಲದ ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಕಲ್ಮಠ ಅವರನ್ನು ಶಿವಮೊಗ್ಗ ಜಿಲ್ಲೆ ಸೊರಬ ಜೆಎಂಎಫ್‌ಸಿಗೆ, ಖಾನಾಪುರ ಜೆಎಂಎಫ್‌ಸಿಯ ವಿದ್ಯಾ ಕೆ.

    ಅವರನ್ನು ಮೈಸೂರಿನ 3ನೇ ಹೆಚ್ಚುವರಿ ನ್ಯಾಯಾಲಯಕ್ಕೆ, ರಾಮದುರ್ಗ ಜೆಎಂಎಫ್‌ಸಿಯ ಮಲ್ಲಿಕಾರ್ಜುನ ಅಂಬಿ ಅವರನ್ನು ಬೀದರ ಜಿಲ್ಲೆ ಬಾಲ್ಕಿ ನ್ಯಾಯಾಲಯಕ್ಕೆ, ಬೆಳಗಾವಿಯ 2ನೇ ಹೆಚ್ಚುವರಿ ನ್ಯಾಯಾಲಯದ ಎನ್.ಅನುಪಮಾ ಅವರನ್ನು ಕೋಲಾರ 3ನೇ ಹೆಚ್ಚುವರಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts