ಭುವನೇಶ್ವರ: ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತ ಸ್ಫೋಟಕಕ್ಕೆ ಬಲಿಯಾದ ದುರಂತವೊಂದು ಸಂಭವಿಸಿದೆ. ರೋಹಿತ್ ಬಿಸ್ವಾಲ್ (43) ಸ್ಫೋಟಕಕ್ಕೆ ಬಲಿಯಾದ ಪತ್ರಕರ್ತ.
ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ಇಂದು ಈ ದುರಂತ ಸಂಭವಿಸಿದೆ. ಮಾವೊವಾದಿಗಳಿಟ್ಟ ಸ್ಫೋಟಕ ಇದೆಂದು ಶಂಕಿಸಲಾಗಿದ್ದು, ವರದಿಗಾರಿಕೆ ವೇಳೆ ಅದರ ಸನಿಹಕ್ಕೆ ಹೋದ ಪತ್ರಕರ್ತ ಸಾವಿಗೀಡಾಗಿದ್ದಾನೆ.
ಒಡಿಶಾದ ದೈನಿಕ ಪತ್ರಿಕೆಯ ವರದಿಗಾರನಾಗಿದ್ದ ರೋಹಿತ್, ಮದನ್ಪುರ್-ರಾಮ್ಪುರ್ ಬ್ಲಾಕ್ನ ಮೋಹನ್ಗಿರಿ ಗ್ರಾಮದ ಪಂಚಾಯತ್ ಚುನಾವಣೆಯಲ್ಲಿ ಗ್ರಾಮಸ್ಥರು ಮತ ಚಲಾಯಿಸಬಾರದು ಎಂದು ಪೋಸ್ಟರ್ಗಳನ್ನು ಅಲ್ಲಿ ಹಾಕಲಾಗಿತ್ತು. ಮಾವೋವಾದಿಗಳು ಅದನ್ನು ಹಾಕಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲಿಗೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಇತರ ಪೊಲೀಸರು ತಲುಪುವುದಕ್ಕೂ ಮೊದಲೇ ತೆರಳಿದ್ದ ವರದಿಗಾರ ಈ ದುರಂತಕ್ಕೆ ಬಲಿಯಾಗಿದ್ದಾನೆ.
ಸಮತಾಮೂರ್ತಿ ಅನಾವರಣ: ವಿಶ್ವದ 2ನೇ ಅತಿ ಎತ್ತರದ ಪ್ರತಿಮೆ ಲೋಕಾರ್ಪಣೆ ಮಾಡಿದ ಮೋದಿ