More

    ಕಾನಿಪ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಸನ್ಮಾನ

    ಗದಗ: ಜಿಲ್ಲಾ ಹಾಗೂ ಪ್ರಾದೇಶಿಕ ದಿನಪತ್ರಿಕೆಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ನಮ್ಮ ಬೇಡಿಕೆ ಈಡೇರಿಕೆಗೆ ಎಲ್ಲ ಸಂಪಾದಕರು ಸಂಘಟಿತರಾಗಬೇಕು ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ ಹೇಳಿದರು.
    ಅವರು ಕಿತ್ತೂರ ಕರ್ನಾಟಕ ಪ್ರಾದೇಶಿಕ ಕನ್ನಡ ದಿನ ಪತ್ರಿಕೆ ಕಛೇರಿಯಲ್ಲಿ ಬುಧವಾರ ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲೆಯ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದರು.
    ಈಗಾಗಲೇ ಸಂಘದಿದ ಸಂಪಾದಕರ ಬೇಡಿಕೆ ಈಡೇರಿಕೆಗೆ ಸಂಬಧಿಸಿದತೆ ಇಲಾಖೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದ್ದು, ಸಂಘಕ್ಕೆ ಹೆಚ್ಚಿನ ಶಕ್ತಿ ತುಂಬಲು ಸಂಪಾದಕರು ಸಂಘಟಿತರಾಗೋಣ ಎಂದು ಹೇಳಿದರು. ಜಿಲ್ಲಾಧ್ಯಕ್ಷ ನೂರಅಹ್ಮದ್ ಮಕಾನದಾರ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿAದ ಈ ಬಾರಿ ಗದಗ ಜಿಲ್ಲೆಯಿಂದ ಇಬ್ಬರು ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿದ್ದು, ಸಂತಸ ತಂದಿದೆ. ಪತ್ರಕರ್ತರಾದ ವೆಂಕಟೇಶ್ ಇಮರಾಪೂರ ಹಾಗೂ ಮಹಳಿಂಗರಾಯ ಪೂಜಾರ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದು ಹೆಮ್ಮೆ ತಂದಿದೆ ಎಂದರು. ಈ ಸಂದರ್ಭದಲ್ಲಿ ಬದರಿನಾಥ ಹೊಂಬಾಳಿ ಪ್ರಶಸ್ತಿಗೆ ಆಯ್ಕೆಯಾದ ವೆಂಕಟೇಶ್ ಇಮರಾಪೂರ ಹಾಗೂ ಯಜಮಾನ್ ಟಿ. ನಾರಾಯಣಪ್ಪ ಪ್ರಶಸ್ತಿಗೆ ಆಯ್ಕೆಯಾದ ಮಹಳಿಂಗರಾಯ್ ಪೂಜಾರ್ ಅವರನ್ನು ಸನ್ಮಾನಿಸಲಾಯಿತು.
    ಈ ವೇಳೆ ಎನ್.ಆರ್. ಭಾಂಡಗೆ, ಅಜೀತ್ ಹೊಂಬಾಳಿ, ಎಚ್.ಎಂ. ಶರೀಫನವರ್, ರಾಜು ಹೆಬ್ಬಳ್ಳಿ, ಜಗದೀಶ್ ಪೂಜಾರ್, ಎಮ್.ಜಿ. ಕುಲಕರ್ಣಿ, ಮೌನೇಶ್ ಬಡಿಗೇರಿ, ಚನ್ನಯ್ಯ ಹಿರೇಮಠ, ಮಂಜು ಜಡಿ, ಸುಭಾಸ್ ಮಳಗಿ, ಕಿರಣ ಕೆಂಚಗುಡಿ, ಹುಸೇನ್ ನದಾಫ್, ನಾಗರಾಜ್ ರಾಹುತ್, ಹರೀಶ್ ಬೆಲೇರಿ, ಪರಶುರಾಮ್ ಬಾರಕೇರ, ಈರಣ್ಣ ಮೂರಶಿಳ್ಳಿನ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts