More

    ಜೋಶಿಗೆ ಸೆಂಟ್ರಲ್ ಕ್ಷೇತ್ರದಿಂದ ಹೆಚ್ಚಿನ ಮತ

    ಹುಬ್ಬಳ್ಳಿ : ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತ ಬಂದಿರುವ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ, ಐದನೇ ಬಾರಿ ದಾಖಲೆಯ ಗೆಲುವು ಸಾಧಿಸುವುದು ಖಚಿತ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

    ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ 51 ಹಾಗೂ 52ನೇ ವಾರ್ಡ್​ಗಳಲ್ಲಿ ಪ್ರಚಾರ ಕಾರ್ಯ ಉದ್ಘಾಟಿಸಿ ಅವರು ಮಾತನಾಡಿದರು.

    ಐಐಟಿ, ಐಐಐಟಿ, ಗುಣಮಟ್ಟದ ಸಿಸಿ ರಸ್ತೆಗಳು, ಬೈಪಾಸ್ ರಸ್ತೆ, ಅಂತರಾಷ್ಟ್ರೀಯ ಗುಣಮಟ್ಟದ ವಿಮಾನ ನಿಲ್ದಾಣ ಅಭಿವೃದ್ಧಿ ಹೀಗೆ ಅನೇಕ ಜನಪರ ಕೆಲಸಗಳನ್ನು ಮಾಡಿರುವ ಪ್ರಲ್ಹಾದ ಜೋಶಿ ಜನಪ್ರಿಯ ಸಂಸದರಾಗಿದ್ದಾರೆ. ಸೆಂಟ್ರಲ್ ಕ್ಷೇತ್ರದಿಂದ ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಜೋಶಿ ಅವರಿಗೆ ನೀಡಲಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರೂ ಸಂಘಟಿತವಾಗಿ ಒಟ್ಟಿಗೆ ಸೇರಿ ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದೇವೆ ಎಂದು ತಿಳಿಸಿದರು.

    ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಮಾತನಾಡಿ, ಕಳೆದ ನಾಲ್ಕು ಬಾರಿ ನನ್ನನ್ನು ಆಶೀರ್ವದಿಸಿದ್ದೀರಿ. ಈಗ ಐದನೇ ಸಾರಿ ಸ್ಪರ್ಧಿಸಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮತ್ತೊಮ್ಮೆ ನನಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

    ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಕೃಷ್ಣ ಗಂಡಗಾಳೇಕರ, ಪ್ರಕಾಶ ಕ್ಯಾರಕಟ್ಟಿ, ಸಿದ್ದೇಶ ಕಬಾಡರ , ಶಿವಯೋಗಿ ಮುಕೊಂಡಿ, ಪರಮ ಚೌಧರಿ, ಬಿ.ಎಂ. ಚಾಡಿಮಠ, ಹರೀಶ ಜಂಗ್ಲಿ, ಮುಕುಂದ ಗುಗ್ಗರಿ, ಲೀಲಾವತಿ ಪಾಸ್ತೆ, ರೇಖಾ ಸರ್ಜನ್, ವಿದ್ಯಾ ನರಸಪ್ಪನವರ ಹಾಗೂ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts