ವಡೋದರಾ: ಅನ್ಲಾಕ್-4 ಹಂತದಲ್ಲಿ ಸಾರ್ವಜನಿಕ ಉದ್ಯಾನವನಗಳು ನಿಧಾನಕ್ಕೆ ಓಪನ್ ಆಗುತ್ತಿವೆ. ಅದಕ್ಕೆ ಸಂಬಂಧಪಟ್ಟಂತೆ ಆಯಾ ರಾಜ್ಯ ಸರ್ಕಾರಗಳು ಮಾರ್ಗಸೂಚಿಗಳನ್ನು ಹೊರಡಿಸುತ್ತಿವೆ.
ಹಾಗೇ ಗುಜರಾತ್ನಲ್ಲೂ ಕಂಟೇನ್ಮೆಂಟ್ ಝೋನ್ಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಪಾರ್ಕ್ಗಳು, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿವೆ.
ಆದರೆ ವಡೋದರಾದಲ್ಲಿ ಬೆಳ್ಳಂಬೆಳಗ್ಗೆ ಕೆಲವರು ತಮ್ಮ ಮೂರ್ಖತನವನ್ನು ಪ್ರದರ್ಶನ ಮಾಡಿದ್ದಾರೆ. ಗಾರ್ಡನ್ಸ್, ಪಾರ್ಕ್ಗಳು ಮತ್ತೆ ಬಳಕೆಗೆ ಮುಕ್ತವಾಗಿದ್ದಕ್ಕೆ ಭರ್ಜರಿ ಪಟಾಕಿ ಸಿಡಿಸಿ, ಸಂಭ್ರಮ ಆಚರಣೆ ಮಾಡಿದ್ದಾರೆ.
ಘಟನೆ ನಡೆದಿದ್ದು ಸಯಾಜಿ ಬಾಗ್ ಉದ್ಯಾನವನದಲ್ಲಿ. ಕೊವಿಡ್-19 ಶುರುವಾಗುವುದಕ್ಕೂ ಮೊದಲು ಆ ಪಾರ್ಕ್ಗೆ ಜಾಗಿಂಗ್, ವಾಕಿಂಗ್, ಫಿಟ್ನೆಸ್ ವ್ಯಾಯಾಮಗಳಿಗಾಗಿ ಹೋಗುತ್ತಿದ್ದವರು ಮಾಡಿದ ಕೆಲಸ ಇದು. ಇಂದು ಮತ್ತೆ ಗಾರ್ಡನ್ ಓಪನ್ ಆಗಿದ್ದನ್ನು ಸಿಕ್ಕಾಪಟೆ ಸಂಭ್ರಮಿಸಿದ್ದಾರೆ. ಉದ್ದನೆಯ ಪಟಾಕಿ ಸರವನ್ನು ಸಿಡಿಸಿ, ವಾಯುಮಾಲಿನ್ಯ, ಶಬ್ದಮಾಲಿನ್ಯ ಮಾಡಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲೆಂದೇ ವಾಕಿಂಗ್, ಜಾಗಿಂಗ್ ಮೊರೆ ಹೋಗುವ ಇವರಿಗೆ, ಮುಂಜಾನೆ ಪಟಾಕಿ ಹೊಡೆದು ಗಬ್ಬೆಬ್ಬಿಸುವುದು ತಪ್ಪು, ಅದೂ ಆರೋಗ್ಯಕ್ಕೆ ಹಾನಿಕಾರಕ ಎಂಬ ಕನಿಷ್ಠ ಅರಿವೂ ಇಲ್ಲದಾಯಿತು ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: ರಾಗಿಣಿ ಪರ ವಕಾಲತ್ತು ವಹಿಸಲು ಮುಂಬೈನಿಂದ ಬಂದ ವಕೀಲರು; ಜಾಮೀನು ಅರ್ಜಿ ಸಲ್ಲಿಕೆ
ಅದೂ ಅಲ್ಲದೆ, ಕೊವಿಡ್-19 ನಿಯಂತ್ರಣಾ ಕ್ರಮವಾದ ಸಾಮಾಜಿಕ ಅಂತರ ನಿಯಮ ಪಾಲನೆಯನ್ನೂ ಮಾಡಿಲ್ಲ. ಕೆಲವರಷ್ಟೇ ಮಾಸ್ಕ್ ಧರಿಸಿದ್ದರು. ಇನ್ನೂ ಒಂದಷ್ಟು ಜನ ಮಾಸ್ಕ್ ಹಾಕಿರಲಿಲ್ಲ.
ನೆಟ್ಟಿಗರಂತೂ ಇದೊಂದು ಮೂರ್ಖತನದ ಪರಮಾವಧಿ ಎಂದೇ ಹೇಳಿದ್ದಾರೆ. ಅನೇಕರು ವಿಡಿಯೋ ಶೇರ್ ಮಾಡಿಕೊಂಡು ಟೀಕೆ ಮಾಡಿದ್ದಾರೆ.(ಏಜೆನ್ಸೀಸ್)
#WATCH Gujarat: Joggers and morning walkers at Sayaji Baug garden celebrate as gardens and parks reopen in Vadodara following Municipal Corporation's order. #COVID19 pic.twitter.com/LqmFHWnV6v
— ANI (@ANI) September 10, 2020