ಭದ್ರಾವತಿ: ಜನ್ನಾಪುರ ಶ್ರೀ ಅಂತರಘಟ್ಟಮ್ಮ ದೇವಸ್ಥಾನದ ಬಳಿ ಇರುವ ವೈನ್ಸ್ಟೋರ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಸೈನ್ಯ ಸಂಘಟನೆ ಕಾರ್ಯಕರ್ತರು ಸೋಮವಾರ ನಗರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ವೈನ್ಶಾಪ್ ಪಕ್ಕದಲ್ಲೇ ದೇವಸ್ಥಾನ, ಅಂಚೆ ಕಚೇರಿ ಇದ್ದು ಮಹಿಳೆಯರು, ವೃದ್ಧರು ಈ ಪ್ರದೇಶದಲ್ಲಿ ಓಡಾಡುವಂತಿಲ್ಲ. ಕೂಗಳತೆ ದೂರದಲ್ಲಿ ನ್ಯಾಯಾಧೀಶರ ಮನೆಗಳಿವೆ. ಫಿಲ್ಟರ್ ಶೆಡ್, ವೇಲೂರು ಶೆಡ್, ಜಿಂಕ್ಲೈನ್ ನಿವಾಸಿಗಳು ಆ ವೈನ್ಶಾಪ್ ಇರುವ ರಸ್ತೆಯಲ್ಲೇ ಸಂಚರಿಸಬೇಕಿದ್ದು ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಟೆಂಡರ್ ಕರೆಯದೆ ಬಸ್ ನಿಲ್ದಾಣ ತೆರವು:
ಚನ್ನಗಿರಿ ರಸ್ತೆ ವಿಸ್ತರಣೆ ನೆಪ ಹೇಳಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಯಾವುದೇ ಟೆಂಡರ್ ಕರೆಯದೆ ಏಕಾಏಕಿ 2 ಸರ್ಕಾರಿ ಬಸ್ ತಂಗುದಾಣ ತೆರವುಗೊಳಿಸಿದ್ದಾರೆ. ಹಿರೇಕೆರೆ ಜಾಗದಲ್ಲಿ ಸಬ್ಟ್ಯಾಂಕ್ ನಿರ್ವಿುಸಲಾಗಿದೆ. ಕೆರೆ ಜಾಗದಲ್ಲಿ ಯಾವುದೇ ಕಟ್ಟಡ ನಿರ್ವಿುಸಬಾರದೆಂಬ ಸುಪ್ರೀಂಕೋರ್ಟ್ ಆದೇಶವಿದ್ದರೂ ಸಬ್ಟ್ಯಾಂಕ್ ನಿರ್ವಿುಸಲಾಗಿದೆ. ಕೂಡಲೇ ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.
ಕರ್ನಾಟಕ ಜನ ಸೈನ್ಯ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಅನಿಲ್, ಅನಂತರಾಮು, ಪರಮೇಶ್, ಆಟೋರಾಜು, ಶಾಂತಮ್ಮ, ಅನುರಾಧಾ, ವಿನುತಾ ಇತರರಿದ್ದರು.