More

    ಹದಗೆಟ್ಟ ರಸ್ತೆ ಕಂಡು ಡಿಸಿಎಂ ಗರಂ

    ಬಾಗಲಕೋಟೆ : ಹದಗೆಟ್ಟ ರಸ್ತೆ ಸಂಚಾರದಿಂದ ಸುಸ್ತಾದ ಲೋಕೋಪಯೋಗಿ ಇಲಾಖೆ ಸಚಿವ, ಡಿಸಿಎಂ ಗೋವಿಂದ ಕಾರಜೋಳ, ಚಿಕ್ಕಲಕಿ ಕ್ರಾಸ್-ತೊದಲಬಾಗಿ ರಸ್ತೆಯಲ್ಲಿ ಅವರ ವಾಹನ ನಿಲ್ಲಿಸಿ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು.

    ಜಮಖಂಡಿ ತಾಲೂಕಿನಲ್ಲಿ ಇನ್ಫೊಸಿಸ್ ಫೌಂಡೇಷನ್ ಸಂಸ್ಥಾಪಕಿ ಸುಧಾಮೂರ್ತಿ ಅವರ ಸರ್ಕಾರಿ ಶಾಲೆಗಳಿಗೆ ದೇಣಿಗೆ ನೀಡಿದ್ದ ಕಂಪ್ಯೂಟರ್ ವಿತರಣೆ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಜೊತೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

    ಸಚಿವರಿಬ್ಬರು ರಸ್ತೆ ಮಾರ್ಗವಾಗಿ ತೆರಳುತ್ತಿದ್ದಾಗ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್-ತೊದಲಬಾಗಿ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಸ್ವತಃ ಪಿಡಬ್ಲುೃಡಿ ಇಲಾಖೆ ಸಚಿವರಾದ ಗೋವಿಂದ ಕಾರಜೋಳ ಈ ರಸ್ತೆ ಸ್ಥಿತಿ ಕಂಡು ಅಧಿಕಾರಿಗಳ ವಿರುದ್ಧ ಗರಂ ಆದರು. ಮಾರ್ಗಮಧ್ಯಯೇ ವಾಹನ ನಿಲ್ಲಿಸಿ ಜಮಖಂಡಿ ಲೋಕೋಪಯೋಗಿ ಇಲಾಖೆ ಎಇಇ ಪಾಂಡುರಂಗ ಗಾಯಕವಾಡ ಮೇಲೆ ಸಿಟ್ಟು ಮಾಡಿದರು.

    ನೋಡಿದ್ರಾ ಇಷ್ಟೊತ್ತು ಗಾಡಿ ಹೇಗೆ ಬಂತು? ನೀವೆಲ್ಲ ಬರೀ ಬೋಗಸ್ ವರದಿ ಕೊಡುತ್ತೀರಿ. ಈ ರಸ್ತೆ ಮರುನಿರ್ಮಾಣಕ್ಕೆ ಟೆಂಡರ್ ಮಾಡಿದ್ದೀರಾ? ಮೊದಲು ರಸ್ತೆ ದುರಸ್ತಿ ಮಾಡಿಸಿ, ನೆರೆಯಿಂದ ಹಾಳಾಗಿರುವ ರಸ್ತೆಯಲ್ಲಿ ಇದನ್ನು ಅಳವಡಿಸಿ ಕೆಲಸ ಮಾಡಬೇಕು. ಶೇ. 100 ರಷ್ಟು ಕೆಲಸ ಆಗಬೇಕು. ನಾ ಮತ್ತೆ ಬರುತ್ತೇನೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts