ಹೈದ್ರಾಬಾದ್: ಜಬರ್ದಸ್ತ್ ಶೋ ಮೂಲಕ ಒಳ್ಳೆಯ ಮನ್ನಣೆ ಗಳಿಸಿದ ನಟಿ ಪವಿತ್ರಾ ಎಂಗೇಜ್ ಮೆಂಟ್ ಆಗಿ ಕೇವಲ ಮೂರು ತಿಂಗಳಾಗಿದೆ. ಮದುವೆಗೂ ಮುನ್ನವೇ ನಟಿ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಈ ಕುರಿತಾಗಿ ನಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಯೂಟ್ಯೂಬ್ ಚಾನೆಲ್ ಮೂಲಕವೂ ಒಳ್ಳೆಯ ಖ್ಯಾತಿ ಪಡೆದಿದ್ದಾರೆ. ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ ಪವಿತ್ರಾ. ನಟಿ ಕಳೆದ ವರ್ಷ ನವೆಂಬರ್ನಲ್ಲಿ ತನ್ನ ಗೆಳೆಯನೊಂದಿಗೆ ನಿಶ್ಚಿತಾರ್ಥದ ಸುದ್ದಿಯನ್ನು ಪ್ರಕಟಿಸಿದರು. ನಿಶ್ಚಿತಾರ್ಥದ ಸುದ್ದಿಯ ಜತೆಗೆ ಗೆಳೆಯನನ್ನೂ ಇದೇ ಸಮಯದಲ್ಲಿ ಪ್ರೇಕ್ಷಕರಿಗೆ ಪರಿಚಯಿಸಲಾಯಿತು.
ಒಂದು ವರ್ಷದಿಂದ ಸಂತೋಷ್ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಪವಿತ್ರಿ, ನವೆಂಬರ್ ನಲ್ಲಿ ಮದುವೆಗೆ ಯೆಸ್ ಹೇಳುವ ಮೂಲಕ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಅಂದಿನಿಂದ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ಬೇಗ ಮದುವೆ ಸುದ್ದಿ ಹೇಳ್ತಾರೆ ಅಂತ ಕಾಯುತ್ತಿದ್ದರೆ ಈಗ ಇಬ್ಬರು ನಿಶ್ಚಿತಾರ್ಥ ಮುರಿದುಕೊಂಡ ಸುದ್ದಿ ಹೇಳಿದ್ದಾರೆ. ಪವಿತ್ರಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಬೇರೆಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
View this post on Instagram
ಸಂತೋಷ್, ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಹಾದಿಗಳು ವಿಭಿನ್ನವಾಗಿದ್ದರೂ, ನಾವು ಹಂಚಿಕೊಂಡ ಕ್ಷಣಗಳು ತುಂಬಾ ವಿಶೇಷವಾಗಿದೆ. ನಮ್ಮ ಜೀವನದಲ್ಲಿ ನಮ್ಮ ವೈಯಕ್ತಿಕ ಪ್ರಯಾಣದಲ್ಲಿ ನಾವಿಬ್ಬರೂ ಉತ್ತಮವಾಗಿರಬೇಕೆಂದು ನಾನು ಬಯಸುತ್ತೇನೆ. ನಮ್ಮ ಹಿತೈಷಿಗಳು ನಮಗೆ ಗೌಪ್ಯತೆ ಮತ್ತು ಬೆಂಬಲವನ್ನು ನೀಡಬೇಕೆಂದು ನಾವು ವಿನಂತಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಿಮ್ಮ ಪ್ರೀತಿ ಮತ್ತು ಬೆಂಬಲ ನಮಗೆ ಮುಂದುವರಿಯಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಧನ್ಯವಾದಗಳು ಪವಿತ್ರಾ ಹೇಳಿದರು.
ಪವಿತ್ರಾ ಈ ಪೋಸ್ಟ್ಗೆ ಕಾಮೆಂಟ್ಗಳ ಆಯ್ಕೆಯನ್ನು ಆಫ್ ಮಾಡಿದ್ದಾರೆ ಎಂಬುದು ಗಮನಾರ್ಹ. ಇನ್ಸ್ಟಾಗ್ರಾಮ್ ನಲ್ಲಿ ಸಂತೋಷ್ ಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ.
ಇವರಿಬ್ಬರು ಬೇರ್ಪಡುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ, ಈ ಹಿಂದೆ ಇಬ್ಬರೂ ಮದುವೆಯ ಬಗ್ಗೆ ಪ್ರಾಂಕ್ ವಿಡಿಯೋ ಮಾಡಿದ್ದರು. ಹೀಗಾಗಿ ಈ ಪೋಸ್ಟ್ ಕೂಡ ಚೇಷ್ಟೆಗಾಗಿ ಮಾಡಿದ್ದಾರಾ ಎಂಬ ಅನುಮಾನ ಈಗ ಹಲವರಿಗೆ ಕಾಡುತ್ತಿದೆ.
ವಿನೀಶ್ ಜತೆ ವಿಜಯಲಕ್ಷ್ಮಿ ದರ್ಶನ್ ವ್ಯಾಲೆಂಟೈನ್ಸ್ ಡೇ; ಡಿ ಬಾಸ್ ಎಲ್ಲಿ ಎಂದ್ರು ಫ್ಯಾನ್ಸ್