ನವದೆಹಲಿ: ಲಕ್ಷದ್ವೀಪವನ್ನು ಮತ್ತೊಂದು ಮಾಲ್ಡೀವ್ಸ್ ಆಗಿ ಮಾಡಲು ಹೊರಟಿರುವ ಭಾರತಕ್ಕೆ ಮಿತ್ರರಾಷ್ಟ್ರ ಇಸ್ರೇಲ್ ಕೈಜೋಡಿಸಲು ಮುಂದೆ ಬಂದಿದೆ.
ಇದನ್ನೂ ಓದಿ: ‘ದುಡ್ಡು ಇಲ್ಲದವ್ರು ದೇವಸ್ಥಾನ ಕಟ್ಟಲು ಸಾಧ್ಯವೇ? ಇರುವಲ್ಲೇ ದೇವರ ಪೂಜಿಸಿ’: ಸಿದ್ದರಾಮಯ್ಯ
ಪ್ರಧಾನಿ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಗಳಿಗೆ ಭೇಟಿ ನೀಡಿದ್ದರಿಂದ ಮಾಲ್ಡೀವ್ಸ್ನ ಮೂವರು ಸಚಿವರು ಅವಹೇಳನ ಮಾಡಿದ್ದಕ್ಕೆ ಭಾರತದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಎರಡು ದೇಶಗಳ ನಡುವೆ ಸಂಬಂಧ ಹಳಸಿದ ಬಳಿಕ ಮಾಲ್ಡೀವ್ಸ್ ಗೆ ಭಾರತೀಯರು ಬಹಿಷ್ಕಾರ ಹಾಕಿದ ಬೆನ್ನಲ್ಲೇ ಲಕ್ಷದ್ವೀಪದಲ್ಲಿ ರೆಸಾರ್ಟ್ ನಿರ್ಮಿಸಲು ಟಾಟಾ ಗ್ರೂಪ್ ಮುಂದಾಗಿತ್ತು. ಇದರ ನಡುವೆ ಭಾರತ ಮಿತ್ರರಾಷ್ಟ್ರ ಇಸ್ರೇಲ್ ಅಭಿವೃದ್ಧಿ ಕಾರ್ಯದಲ್ಲಿ ಕೈ ಜೋಡಿಸಲು ಮುಂದಾಗಿದೆ.
ಮುಂದಿನ ದಿನಗಳಲ್ಲಿ ಲಕ್ಷದ್ವೀಪವನ್ನು ಮಾದರಿ ಪ್ರವಾಸೀ ತಾಣವಾಗಿ ಮಾಡಲು ಹೊರಟಿರುವ ಭಾರತಕ್ಕೆ ತನ್ನ ಬೆಂಬಲವಿದೆ. ಅಷ್ಟೇ ಅಲ್ಲ, ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಿ ಬಳಕೆಗೆ ಯೋಗ್ಯವಾಗಿ ಮಾಡುವ ಯೋಜನೆಗೆ ಕಳೆದ ವರ್ಷವೇ ಇಸ್ರೇಲ್ ಪ್ಲ್ಯಾನ್ ಮಾಡಿತ್ತು. ಇದೀಗ ಆ ಯೋಜನೆಯನ್ನು ಜಾರಿಗೆ ತರಲು ಇಸ್ರೇಲ್ ಮುಂದಾಗಿದೆ.