ಲಂಡನ್: ಮಲೇಷ್ಯಾದಲ್ಲಿ ತಲೆಮರೆಸಿಕೊಂಡಿರುವ, ಭಾರತ ಹಾಗೂ ಬಾಂಗ್ಲಾದೇಶದಲ್ಲಿ ವಾಂಟೆಡ್ ಆಗಿರುವ ಇಸ್ಲಾಮಿಕ್ ಪ್ರಚಾರಕ, ಉಗ್ರರ ನಂಟಿನ ಆರೋಪಿ ಝಾಕೀರ್ ನಾಯ್ಕ್ಗೆ ಯುನೈಟೆಡ್ ಕಿಂಗ್ಡಂನಲ್ಲೂ ಕುತ್ತು ಎದುರಾಗಿದೆ.
ಈತನ ಒಡೆತನ ಪೀಸ್ ಟಿ.ವಿ. ಹಾಗೂ ಪೀಸ್ ಟಿ.ವಿ. (ಉರ್ದು) ವಾಹಿನಿಗಳಿಗೆ ಅಲ್ಲಿನ ಮಾಧ್ಯಮ ನಿಯಂತ್ರಕ ಸಂಸ್ಥೆ ಆಪ್ಕಾಮ್ ಬರೋಬ್ಬರಿ ಮೂರು ಲಕ್ಷ ಪೌಂಡ್ (ಅಂದಾಜು 2.75 ಕೋಟಿ ರೂ.) ದಂಡ ವಿಧಿಸಿದೆ. ಈ ಮೂಲಕ ತನ್ನ ವಾಹಿನಿಗಳಲ್ಲಿ ಈತ ಕೋಮು ಭಾವನೆ ಕೆರಳಿಸುವ ಹಾಗೂ ಹಿಂಸೆಯನ್ನು ಪ್ರಚೋದಿಸುವ ಭಾಷಣ ಮಾಡುತ್ತಿದ್ದ ಎನ್ನುವುದು ಕೂಡ ಸಾಬೀತಾದಂತಾಗಿದೆ.
ಇದನ್ನೂ ಓದಿ; ಶಾಲೆಗಳನ್ನು ಪಾಳಿಗಳಲ್ಲಿ ನಡೆಸುವುದಕ್ಕೆ ವಿರೋಧವೇಕೆ?
ದ್ವೇಷಭಾವ ಬೆಳೆಸುವ ಹಾಗೂ ಕೊಲೆಯನ್ನು ಪ್ರಚೋದಿಸುವ ಭಾಷಣಗಳನ್ನು ನಿರಂತರವಾಗಿ ತನ್ನ ವಾಹಿನಿಗಳಲ್ಲಿ ಬಿತ್ತರಿಸಿದ್ದಕ್ಕೆ ಈ ದಂಡ ವಿಧಿಸಲಾಗಿದೆ ಎಂದು ಆಫ್ಕಾಮ್ ಸಂಸ್ಥೆ ಹೇಳಿದೆ. ಪೀಸ್ ಟಿವಿಯ ಪಾಲುದಾರ ಸಂಸ್ಥೆ ಲಾರ್ಡ್ ಕಮ್ಯೂನಿಕೇಷನ್ಸ್ಗೆ ಒಂದು ಲಕ್ಷ ಪೌಂಡ್ ಪೀಸ್ ಟಿವಿ ಉರ್ದು ವಾಹಿನಿಯ ಒಡೆತನ ಹೊಂದಿರುವ ಕ್ಲಬ್ ಟಿವಿಗೆ ಎರಡು ಲಕ್ಷ ಪೌಂಡ್ ದಂಡ ವಿಧಿಸಲಾಗಿದೆ.
ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ತನ್ನ ವಾಹಿನಿಗಳಲ್ಲಿ ಕೋಮು ಭಾವನೆ ಕೆರಳಿಸುವ ಕಾರ್ಯಕ್ರಮ ಬಿತ್ತರಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇದರ ತನಿಖೆ ನಡೆಸುತ್ತಿದ್ದಾಗಲೇ ಜಾಕೀರ್ ಹುಸೇನ್ ಮಲೇಷ್ಯಾಗೆ ಪರಾರಿಯಾಗಿ ಆಶ್ರಯ ಪಡೆದುಕೊಂಡಿದ್ದಾನೆ.
ಇದನ್ನೂ ಓದಿ; ನೀವು ವಾಸವಿರುವ ಪ್ರದೇಶದಲ್ಲಿ ಸೋಂಕು ನಿವಾರಕ ಸಿಂಪಡಿಸಿದ್ದಾರಾ? ಹಾಗಿದ್ದರೆ ಈ ಸುದ್ದಿ ಓದಿ…
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ 2016ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಕೃತ್ಯಗಳಲ್ಲೂ ಈತನ ಪಾತ್ರವಿರುವ ಆರೋಪದಲ್ಲಿಯೂ ಈತ ಬಾಂಗ್ಲಾ ಸರ್ಕಾರಕ್ಕೂ ಬೇಕಾಗಿದ್ದಾನೆ.
ಝಾಕೀರ್ ಹಸ್ತಾಂತರಕ್ಕೆ ಭಾರತ ಮನವಿ: ತಲೆ ಮರೆಸಿಕೊಂಡಿರುವ ಆರೋಪಿ ಝಾಕೀರ್ ನಾಯ್ಕ್ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಗುರುವಾರವಷ್ಟೇ (ಮೇ 14) ಭಾರತ ಸರ್ಕಾರ ಉನ್ನತ ಮಟ್ಟದಲ್ಲಿ ಮಲೇಷ್ಯಾಗೆ ಮನವಿ ಸಲ್ಲಿಸಿದೆ.
ಸಿಬ್ಬಂದಿಗೆ ಸಂಬಳ ನೀಡಲು ಜಮೀನು ಮಾರಾಟಕ್ಕೆ ಮುಂದಾದ ತಿರುಪತಿ ದೇಗುಲ ಮಂಡಳಿ