ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ ಕಂಗನಾ ರಣಾವತ್ ಹಾಕುವ ಪೋಸ್ಟ್ಗಳ ಬಗ್ಗೆ ಕ್ರಿಕೆಟಿಗ ಇರ್ಫಾನ್ ಪಠಾಣ್ ಇತ್ತೀಚೆಗಷ್ಟೇ ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ಮತ್ತೊಮ್ಮೆ ಮಾತನಾಡಿರುವ ಅವರು, ಕಂಗನಾ ಟ್ವೀಟ್ಗಳೇನಿದ್ದರೂ ದ್ವೇಷ ಸಾಧಿಸುವುದಕ್ಕೆ ಇದ್ದರೆ, ತಮ್ಮ ಟ್ವೀಟ್ಗಳು ಮಾನವೀಯತೆಯನ್ನು ಸಾರುವುದಕ್ಕಿರುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಕೆರಿಯರ್ನಲ್ಲೇ ರಾಧೇ ಅತ್ಯಂತ ಕೆಟ್ಟ ಚಿತ್ರವಂತೆ!
ಗುರುವಾರ ಹೊಸ ಟ್ವೀಟ್ ಮಾಡಿರುವ ಇರ್ಫಾನ್ ಪಠಾಣ್, ಒಂದು ಟ್ವೀಟ್ ಹಿಂದೆ ತಮ್ಮ ಉದ್ದೇಶವೇನಿರುತ್ತದೆ ಮತ್ತು ಕಂಗನಾ ಅವರ ಉದ್ದೇಶಗಳೇನಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ನನ್ನ ಎಲ್ಲ ಟ್ವೀಟ್ಗಳು ಮಾನವೀಯತೆ ಅಥವಾ ಈ ದೇಶದ ಪ್ರಜೆಗಳ ಹಿತಾಸಕ್ತಿಯಲ್ಲಿ ಇರುತ್ತವೆ. ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನ ದೇಶವನ್ನು ಪ್ರತಿನಿಧಿಸಿದವನು ಮತ್ತು ನನ್ನ ಜವಾಬ್ದಾರಿಗಳೇನಿರಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಆದೇ ಕಂಗನಾ ತರಹದವರು ಸೋಷಿಯಲ್ ಮೀಡಿಯಾದಲ್ಲಿ ಹೇಗಿರಬೇಕು ಎಂಬ ಜವಾಬ್ದಾರಿಯನ್ನು ಅರಿಯದೆ, ಬರೀ ದ್ವೇಷ ಸಾಧಿಸಿ ಬ್ಯಾನ್ ಆಗುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ ಇರ್ಫಾನ್.
ಇದನ್ನೂ ಓದಿ: ರಜನಿಕಾಂತ್ ಬಗ್ಗೆ ಹೀಗೊಂದು ಹೊಸ ಜೋಕು …
ಇರ್ಫಾನ್ ಹೀಗೊಂದು ಟಾಂಗ್ ಕೊಟ್ಟಿದ್ದರೂ, ಕಂಗನಾ ಮಾತ್ರ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಕಳೆದ ವಾರವಷ್ಟೇ ಕರೊನಾ ಪಾಸಿಟಿವ್ ಆಗಿದ್ದ ಕಂಗನಾ, ಮುಂಬೈನಲ್ಲಿ ತಮ್ಮ ಮನೆಯಲ್ಲೇ ಕ್ವಾರಂಟೈನ್ನಲ್ಲಿದ್ದಾರೆ. ಇರ್ಫಾನ್ಗೆ ಕಂಗನಾ ಯಾವ ತರಹ ಪ್ರತಿಕ್ರಿಯಿಸುತ್ತಾರೋ ಎಂಬ ಕುತೂಹಲ ಎಲ್ಲರಿಗೂ ಇದೆ.