ಹುಬ್ಬಳ್ಳಿ: ಹá–ಧಾ ಪೂರ್ವ ಬಿಜೆಪಿ ಒಬಿಸಿ ಮೋರ್ಚಾದಿಂದ ನಗರದ ದುರ್ಗದಬೈಲ್ ವೃತ್ತದಲ್ಲಿ ಕನಕದಾಸರ ಜಯಂತಿಯನ್ನು ಗುರುವಾರ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕ ಅರವಿಂದ ಬೆಲ್ಲದ, ಕನಕದಾಸರು ವಿಶ್ವಕ್ಕೆ ಭಕ್ತಿಯ ಹೊಸ ಪರಿಕಲ್ಪನೆ ಪರಿಚಯಿಸಿದರು. ನಾಡಿನ ಭಕ್ತಿ ಪಂಥವನ್ನು ಸಮೃದ್ಧಗೊಳಿಸಿ ವೈಚಾರಿಕ ನೆಲೆಯಲ್ಲಿ ವಿಶ್ವಕ್ಕೆ ಸಂದೇಶ ನೀಡಿದ ದಾಸ ಶ್ರೇಷ್ಠರು ಇವರು ಎಂದರು.
ಹು-ಧಾ ಪೂರ್ವ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದಮಠ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಲ್ಲಪ್ಪ ಶಿರಕೋಳ, ಸತೀಶ ಶೇಜವಾಡಕರ, ಶಿವು ಮೆಣಸಿನಕಾಯಿ, ಚಂದ್ರಶೇಖರ ಗೋಕಾಕ, ರಂಗಾ ಬದ್ದಿ, ದತ್ತಮೂರ್ತಿ ಕುಲಕರ್ಣಿ, ಶಂಕರಪ್ಪ ಛಬ್ಬಿ, ಮಂಜುನಾಥ ಬಿಜವಾಡ, ಮಂಜುನಾಥ ಕಾಟಕರ, ಸಂತೋಷ ಅರಕೇರಿ, ಪ್ರತಿಭಾ ಪವಾರ, ಅನುರಾಧಾ ಚಿಲ್ಲಾಳ, ಸುವರ್ಣಾ ಜಂಗಮಗೌಡರ, ಲಕ್ಷ್ಮೀಕಾಂತ ಘೋಡಕೆ ಇತರರಿದ್ದರು.