ಕೋಲಾರ: ದಲಿತ ಪರ ಎನ್ನುವ ಕಾಂಗ್ರೆಸ್ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ್ದರ ಜತೆಗೆ ದಲಿತರನ್ನು ಮತಬ್ಯಾಂಕ್ ಮಾಡಿಕೊಂಡು ಶೋಷಿಸುತ್ತ ಬಂದಿದೆ. ಇನ್ನಾದರೂ ತುಳಿತಕ್ಕೆ ಒಳಗಾಗಿರುವ ಸಮುದಾಯ ಎಚ್ಚೆತ್ತುಕೊಂಡು ದಲಿತರಿಗೆ ನ್ಯಾಯ ಒದಗಿಸುತ್ತಿರುವ ಬಿಜೆಪಿ ಬೆಂಬಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಆರ್.ವರ್ತೂರು ಪ್ರಕಾಶ್ ತಿಳಿಸಿದರು.
ನಗರದ ಅಂಬೇಡ್ಕರ್ ನಗರದಲ್ಲಿ ಸೋಮವಾರ ರೋಡ್ ಶೋ ಮತ್ತು ಮನೆ ಮನೆ ಪ್ರಚಾರ ನಡೆಸಿದ ನಂತರ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು. ಸ್ವಾತಂತ್ರ ಕಾಲದಿಂದಲೂ ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡುತ್ತ ಬಂದಿದೆ. ಅಂಬೇಡ್ಕರ್ರನ್ನು ಚುನಾವಣೆಯಲ್ಲಿ 2 ಬಾರಿ ಸೋಲಿಸಿದ ಕಾಂಗ್ರೆಸ್ ಅವರು ಮೃತಪಟ್ಟಾಗ ದೆಹಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಕೂಡ ಜಾಗ ಕೊಡಲಿಲ್ಲ. ದಲಿತರು, ಬಡವರ ಮೂಗಿಗೆ ಚುನಾವಣೆ ಸಂದರ್ಭ ತುಪ್ಪ ಸವರಿ ಮತ ಪಡೆದು ವಂಚಿಸುತ್ತ ಬಂದಿದೆ. ಇನ್ನಾದರೂ ಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಟಾನುಟಿ ನಾಯಕರು ಮಲ್ಲಿಕಾರ್ಜುನ ರ್ಖಗೆ, ಡಾ.ಜಿ.ಪರಮೇಶ್ವರ್, ಶ್ರೀನಿವಾಸ ಪ್ರಸಾದ್, ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿ ಅವರು ಮುಖ್ಯಮಂತ್ರಿಗಳಾಗುವುದನ್ನು ತಪ್ಪಿಸಿದರು. ಆದರೆ ಬಿಜೆಪಿ ಡಿಸಿಎಂ ಆಗಿ ಗೋವಿಂದ ಕಾರಜೋಳ, ಎಂಎಲ್ಸಿಯಾಗಿ ಛಲವಾದಿ ನಾರಾಯಣಸ್ವಾಮಿ, ಸಚಿವರನ್ನಾಗಿ ಆನೇಕಲ್ನ ಎ.ನಾರಾಯಣಸ್ವಾಮಿ ಅವರನ್ನು ಮಾಡಿ ನ್ಯಾಯ ಒದಗಿಸಿದೆ. ಸಾಮಾನ್ಯ ಕುಟುಂಬದ ಎಸ್.ಮುನಿಸ್ವಾಮಿ ಅವರನ್ನು ಸಂಸದರನ್ನಾಗಿಸಿದೆ. ಕಾಂಗ್ರೆಸ್ ಎಷ್ಟು ಮಂದಿ ದಲಿತರನ್ನು ಜನಪ್ರತಿನಿಧಿಗಳನ್ನಾಗಿಸಿದೆ ಎಂದು ಪ್ರಶ್ನಿಸಿದ ಅವರು, ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ಕೊಟ್ಟಿದ್ದ ಜಾತಿ ಪ್ರಮಾಣ ಪತ್ರ ವಿವಾದ ನ್ಯಾಯಾಲಯದಲ್ಲಿದ್ದರೂ, ಕೊತ್ತೂರು ಮಂಜುನಾಥ್ಗೆ ಕೋಲಾರದಲ್ಲಿ ಟಿಕೆಟ್ ಕೊಟ್ಟು ಮತ್ತೆ ದಲಿತರಿಗೆ ಅನ್ಯಾಯವೆಸಗಿದೆ ಎಂದರು.
ಗಾಂಧಿನಗರ ಮುಖಂಡರಾದ ಅಪ್ಪಿ, ಅರುಣ್, ಮುನಿಯಪ್ಪ, ಮಧು, ರಾಜು, ಪ್ರಭಾಕರ್, ಪ್ರಭು, ಶಂಕರ್, ಗಂಗಾಧರ್ ಉಪಸ್ಥಿತರಿದ್ದರು.
ವೇಮಗಲ್ನಲ್ಲಿ 10 ಸಾವಿರ ಲೀಡ್ ನಿರೀಕ್ಷೆ
ಕೋಲಾರ: ವೇಮಗಲ್ ಹೋಬಳಿಯಲ್ಲಿ ಈ ಹಿಂದೆ ನನಗೆ 3500 ಮತ ಲೀಡ್ ಬಂದಿದ್ದು, ಈ ಬಾರಿ 10 ಸಾವಿರ ಲೀಡ್ ಬರುವ ನಿರೀೆಯಿದೆ ಎಂದು ಬಿಜೆಪಿ ಅಭ್ಯರ್ಥಿ ವರ್ತೂರು ಆರ್.ಪ್ರಕಾಶ್ ತಿಳಿಸಿದರು.
ತಾಲೂಕಿನ ದೇವರಹಳ್ಳಿ, ಇರಗಸಂದ್ರದಲ್ಲಿ ಜೆಡಿಎಸ್ ತೊರೆದ 20ಕ್ಕೂ ಹೆಚ್ಚು ಯುವಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ಈ ಭಾಗದ ಕೈಗಾರಿಕೆಗಳಲ್ಲಿ ಯುವಕ ಯುವತಿಯರಿಗೆ ಕೆಲಸ ಕೊಡಿಸಿ, ಬಸ್ ಸೌಕರ್ಯ ಮಾಡಿಸಿಕೊಡಲಾಗುವುದು.ಅಗತ್ಯವಿರುವಲ್ಲಿ ಶುದ್ಧ ನೀರಿನ ಟಕಗಳನ್ನು ಸ್ಥಾಪಿಸಲಾಗುವುದು ಎಂದರು.
ಮುಖಂಡರಾದ ಬೆಗ್ಲಿಸೂರ್ಯ ಪ್ರಕಾಶ್, ತಾಪಂ ಸದಸ್ಯೆ ಮಂಜುಳಾ ರಾಜಣ್ಣ, ಕದರಿಪುರ ನಾರಾಯಣಪ್ಪ, ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.