ನವದೆಹಲಿ: ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಕೈಗಳನ್ನು ಪದೇಪದೆ ತೊಳೆದುಕೊಂಡು ಸ್ವಚ್ಛಗೊಳಿಸಿಕೊಳ್ಳುವುದು, ಖರೀದಿಸಿದ ತರಕಾರಿ, ಹಣ್ಣುಗಳನ್ನು ಬಿಸಿನೀರಿನಲ್ಲಿ ತೊಳೆದು ಬಳಸುವುದನ್ನು ಮಾಡುತ್ತಿದ್ದೇವೆ. ಯಾವುದೇ ನಂಜುಕಾರಕ ಅಂಶ ಆಹಾರದ ಮೂಲಕ ದೇಹವನ್ನು ಸೇರಬಾರದು ಎಂಬುದು ಈ ಎಚ್ಚರಿಕೆಗೆ ಕಾರಣ.
ಇದರ ಜತೆಗೆ ಹೊರಗೆ ಹೋದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸುತ್ತಿದ್ದೇವೆ. ಆದರೆ, ಮುಂದಿನ ದಿನಗಳಲ್ಲಿ ದವಸಧಾನ್ಯಗಳು, ಕರೆನ್ಸಿ ನೋಟುಗಳು ಮತ್ತಿತರ ವಸ್ತುಗಳ ಮೂಲಕ ಕೋವಿಡ್ ಸೋಂಕು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ, ಸೋಂಕು ತಡೆಗಟ್ಟುವ ಸಲುವಾಗಿ ದವಸಧಾನ್ಯ, ಕರೆನ್ಸಿ ನೋಟುಗಳನ್ನು ತೊಳೆಯಲು ಸಾಧ್ಯವಿಲ್ಲ. ಹಾಗಾದರೆ ಏನು ಮಾಡುವುದು…?
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಅದು ಟ್ರಂಕ್ ಗಾತ್ರದ ಸಾಧನವನ್ನು ಸಿದ್ಧಪಡಿಸಿದೆ. ಈ ಟ್ರಂಕ್ನಲ್ಲಿ ನೇರಳಾತೀತ ರೋಗಾಣುಹಾರಕ ಪ್ರದೀಪನ (ಅಲ್ಟ್ರಾವೈಲೆಟ್ ಜರ್ಮಿಸಿಡಲ್ ಇರೇಡಿಏಷನ್) ತಂತ್ರಜ್ಞಾನವನ್ನು ಅಳವಡಿಸಿದೆ.
ದವಸಧಾನ್ಯ, ಕರೆನ್ಸಿ ನೋಟುಗಳು, ವಾಚ್ ಮತ್ತಿತರ ಸಾಧನಗಳನ್ನು ಈ ಟ್ರಂಕ್ ಗಾತ್ರದ ಸಾಧನದಲ್ಲಿ ಕೆಲ ಸೆಕೆಂಡ್ಗಳವರೆಗೆ ಇರಿಸುವುದರಿಂದ ಅವೆಲ್ಲವೂ ಎಲ್ಲ ಬಗೆಯ ವೈರಾಣು ಮತ್ತು ಸೂಕ್ಷ್ಮಾಣುಗಳಿಂದ ಮುಕ್ತವಾಗುತ್ತವೆ. ಹಾಗಾಗಿ, ಮನೆಯೊಳಗೆ ಕೋವಿಡ್ 19ನಂಥ ಸೋಂಕುಗಳ ಪ್ರವೇಶವನ್ನು ನಿರ್ಬಂಧಿಸಬಹುದು ಎಂದು ಐಐಟಿ ಹೇಳಿದೆ.
ಟ್ರಂಕ್ ಗಾತ್ರದ ಈ ಸಾಧನವನ್ನು ಮನೆಗಳ ಬಾಗಿಲಲ್ಲಿ ಅಳವಡಿಸಬಹುದು. ಪ್ರತಿಯೊಂದು ವಸ್ತುವನ್ನು ಇದರಲ್ಲಿ ಇರಿಸಿ, ವೈರಾಣು ಮತ್ತು ಸೂಕ್ಷ್ಮಾಣು ಮುಕ್ತಗೊಳಿಸಿ ಮನೆಯೊಳಗೆ ಕಂಡೊಯ್ಯಬಹುದು ಎಂದು ವಿವರಿಸಿದೆ.
ಕೋವಿಡ್ 19ನ ಜಾಗತಿಕ ಕೇಂದ್ರ ಬಿಂದು ವುಹಾನ್ನಲ್ಲಿ ಕರೊನಾ ವೈರಸ್ ಬಳಿಕ ‘ಬಾಡಿಗೆ‘ಯ ಹೊಸ ತಲೆನೋವು