More

    ಆರೋಗ್ಯದ ಕಡೆಗೂ ಗಮನ ನೀಡಲಿ

    ಇಂಡಿ: ಕರೊನಾ ಸೋಂಕಿತರ ಆರೋಗ್ಯ ಕಾಪಾಡಲು ಸದಾ ಸೇವಾ ಸನ್ನದ್ಧರಾಗಿ ಕೆಲಸ ಮಾಡುವವರು ತಮ್ಮ ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.

    ಮಂಗಳವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಲಾಖೆಯಿಂದ ಕೊಡಮಾಡಿದ ಆರು ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್‌ನ್ನು ಸಾರ್ವಜನಿಕ ಆಸ್ಪತ್ರೆಗೆ ನೀಡಿ ಅವರು ಮಾತನಾಡಿ, ಕರೊನಾ ಸೇನಾನಿಗಳಾಗಿ ಸೇವೆ ಸಲ್ಲಿಸುತ್ತಿರುವ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶುಶ್ರೂಶಕ ಹಾಗೂ ವರ್ಗದ ನೌಕರರ ಸೇವೆ ಪ್ರಶಂಸಿಸಿದರು.

    ಕಂದಾಯ ಉಪ ವಿಭಾಗಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಆಮ್ಲಜನಕ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿರುವ ಮೊದಲ ಹಂತದಲ್ಲಿ ಉಸಿರಾಟದ ತೊಂದರೆಗೀಡಾಗುವ ರೋಗಿಗಳಿಗೆ ಈ ಯಂತ್ರ ಅಳವಡಿಸಿದರೆ ಅವರನ್ನು ಸಂಕಷ್ಟದಿಂದ ಪಾರುಮಾಡಿ ಅವರ ಅಮೂಲ್ಯ ಜೀವ ಉಳಿಸಿಕೊಳ್ಳಬಹುದಾಗಿದೆ ಎಂದರು.

    ತಹಸೀಲ್ದಾರ್ ಚಿದಂಬರ ಕುಲಕರ್ಣಿ, ಡಾ. ರಾಜೇಶ ಕೋಳೆಕರ, ಡಾ. ಅನೀಲ ವಾಲಿ, ಪ್ರೀತಿ ಕೋಳೆಕರ, ರಮೇಶ ರಾಠೋಡ, ಜಗದೀಶ ಬಿರಾದಾರ, ಅಮೀತ ಕೋಳೇಕರ, ವಿಪುಲ ಕೋಳೆಕರ, ವಿಜಯಲಕ್ಷ್ಮಿ ಹಾದಿಮನಿ, ಗುರುಬಾಯಿ ಹಿರೆಪಟ್ಟ, ಲಲಿತಾ ಮಠ, ಶ್ರೀದೇವಿ, ಶಿವಾನಂದ ದೇವರ, ಬಸು ಢವಳಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts