ನವದೆಹಲಿ: ತಬ್ಲಿಘ್ ಜಮಾತ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಪಿಂಜ್ರಾ ತೋಡ್ ಗ್ರೂಪ್, ಜಾಮಿಯಾ ಕೋ-ಆರ್ಡಿನೇಷನ್ ಕಮಿಟಿ, ಹಜರತ್ ನಿಜಾಮುದ್ದೀನ್ ಮರ್ಕಜ್…..
ಕಳೆದ ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸಂಭವಿಸಿದ ಗಲಭೆಯಲ್ಲಿ ಪ್ರಮುಖ ಆರೋಪಿಯಾಗಿರುವ ಫೈಸಲ್ ಫಾರೂಖ್ ಮೇಲಿನ ಎಲ್ಲ ಸಂಘಟನೆಗಳ ಪ್ರಮುಖರೊಂದಿಗೆ ನಂಟು ಹೊಂದಿದ್ದ. ಗಲಭೆ ನಡೆದಿದ್ದ ಸಂದರ್ಭದಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದ ಎಂದು ಪೊಲಿಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಇದನ್ನೂ ಓದಿ; ‘ಯಾವುದಕ್ಕೂ ಜತೆಗೊಂದು ಸುತ್ತಿಗೆಯಿರಲಿ…’ ಜನರಿಗೆ ಮುಂಬೈ ಪಾಲಿಕೆ ಸಲಹೆ…..!
ಗಲಭೆಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ 18 ಜನರ ಪೈಕಿ ಪ್ರಮುಖನಾಗಿರುವ ಫಾರೂಖ್, ದೆಹಲಿಯ ದಯಾಳ್ಪುರದಲ್ಲಿರುವ ರಾಜಧಾನಿ ಪಬ್ಲಿಕ್ ಸ್ಕೂಲ್ನ ಮಾಲೀಕನೂ ಆಗಿದ್ದಾನೆ. ದೆಹಲಿಯ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಮಹಮ್ಮದ್ ಸಾದ್ ಆಪ್ತನೆಂದೇ ಹೇಳಲಾಗಿರುವ ಅಬ್ದುಲ್ ಅಲೀಂ ಜತೆಗೆ ಫಾರೂಖ್ ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಶಾಲೆ ಮೇಲೆ ದಾಳಿಗೆ ಷಡ್ಯಂತ್ರ: ಗಲಭೆಕೋರರು ಆರಂಭದಲ್ಲಿ ಫಾರೂಖ್ನ ರಾಜಧಾನಿ ಸ್ಕೂಲ್ ಸಮೀಪವಿದ್ದ ಡಿಆರ್ಪಿ ಕಾನ್ವೆಂಟ್ ಸ್ಕೂಲ್ ಮೇಲೆ ದಾಳಿ ನಡೆಸಿದ್ದರು. ಇದು ಫಾರೂಖ್ ಅಣತಿ ಮೇರೆಗೆ ನಡೆದಿತ್ತು. ಇದಕ್ಕಾಗಿ ಷಡ್ಯಂತ್ರ ರಚಿಸಿ ಶಾಲೆ ಮೇಲೆ ದಾಳಿ ನಡೆಸಿದ್ದ ಎನ್ನುವುದು ಕೂಡ ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ; ವಿಲೀನ ಕಾಲವೂ ಮುಗೀತು… ಶುರುವಾಗಿದೆ ಖಾಸಗೀಕರಣ ಪ್ರಕ್ರಿಯೆ; ಮಾರಾಟಕ್ಕಿವೆ ಮೂರು ಸರ್ಕಾರಿ ಬ್ಯಾಂಕ್ಗಳು…!
ಇನ್ನೊಂದೆಡೆ, ಫಾರೂಖ್ ತಬ್ಲಿಘ್ನ ಅಬ್ದುಲ್ ಅಲೀಂ ಜತೆ ನಂಟು ಹೊಂದಿರುವುದು ತಬ್ಲಿಘ್ ಮುಖ್ಯಸ್ಥರಿಗೆ ಕುತ್ತಾಗಿ ಪರಿಣಮಿಸಿದೆ. ಕರೊನಾ ಕಾರಣದಿಂದಾಗಿ ಕುಖ್ಯಾತಿಗೆ ಒಳಗಾಗಿದ್ದ ತಬ್ಲಿಘ್ ಜಮಾತ್ನ ನಿಜಾಮುದ್ದೀನ್ ಮರ್ಕಜ್ ಮತ್ತೊಮ್ಮೆ ಪೊಲೀಸರ ನಿಗಾಕ್ಕೆ ಬಂದಂತಾಗಿದೆ.
‘ನನ್ನ ಮಕ್ಕಳನ್ನ ಈ ವರ್ಷ ಶಾಲೆಗೆ ಕಳುಹಿಸಲ್ಲ’….. ಪಾಲಕರಿಗೆ ಇರುವ ಆಯ್ಕೆಗಳೇನು?