ಹುರಳೀಕುಪ್ಪಿ: ಸವಣೂರು ತಾಲೂಕಿನ ಹುರಳೀಕುಪ್ಪಿ ಗ್ರಾಮದ ಶ್ರೀ ಮಂಜುನಾಥ ರಾಮಣ್ಣ ಅಯ್ಯಣ್ಣನವರ ಮತ್ತು ಯಲ್ಲಪ್ಪ ಅಯ್ಯಣ್ಣನವರ ಅವರಿಗೆ ಸೇರಿದ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ ಉಂಟಾಗಿದೆ.
6 ಎಕರೆ ಬಳ್ಳಿ ಶೇಂಗಾದ ಹೊಟ್ಟು ಹಾಗೂ 4 ಟ್ರ್ಯಾಕ್ಟರ್ನಷ್ಟು ಭತ್ತದ ಹುಲ್ಲು ಸುಟ್ಟು ಬಸ್ಮವಾಗಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ಎಎಸ್ಐ ಜಿ.ಐ. ತಿರುಮಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.