ಐಮಂಗಲ: ಪ್ರತಿಯೊಬ್ಬರಿಗೂ ತಮ್ಮ ರಕ್ತದ ಗುಂಪಿನ ಕುರಿತು ಅರಿವಿರಬೇಕು ಎಂದು ಕಿರಿಯ ಆರೋಗ್ಯ ಸಹಾಯಕ ರಮೇಶ್ ಹೇಳಿದರು.
ಹೋಬಳಿಯ ಪಾಲವ್ವನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಕ್ತದ ಮಾದರಿ ಪರೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೇರೆಯವರಿಗೆ ರಕ್ತ ಕೊಡಬೇಕಾದ ಸಂದರ್ಭ, ಅಪಘಾತ ಹಾಗೂ ಇನ್ನಿತರ ತುರ್ತು ಸನ್ನಿವೇಶದಲ್ಲಿ ರಕ್ತದ ಗುಂಪಿನ ತಿಳಿವಳಿಕೆ ಅವಶ್ಯ ಎಂದರು.