ಬೂದಿಕೋಟೆ: ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯಿಂದ ಪರವಾನಗಿ ಪಡೆಯದೆ ಟಾರ್ ಮತ್ತು ಜಲ್ಲಿ ಮಿಕ್ಸರ್ ಟಕ ಆರಂಭಿಸಿದ್ದು, ಇದರಿಂದ ಬರುವ ಕೆಮಿಕಲ್ಯುಕ್ತ ದಟ್ಟ ಹೊಗೆಯಿಂದ ಸುತ್ತಮುತ್ತ ಗ್ರಾಮಗಳ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಬಂಗಾರಪೇಟೆ-ಮಾಲೂರು ಮಾರ್ಗದ ಕಣಿವೆಕಲ್ಲು ಹಾಗೂ ರಾಮಾಪುರ ಗೇಟ್ ಮುಖ್ಯರಸ್ತೆ ಬಳಿ ಬೆಂಗಳೂರು ಮೂಲದ ಆರ್.ಎಂ.ಪ್ರಾಜೆಕ್ಟ್ ಎಂಬ ಖಾಸಗಿ ಕಂಪೆನಿ ಟಕ ತೆರೆದಿದೆ.
ಇಲ್ಲಿಂದ ನಿತ್ಯ ನೂರಾರು ಟಿಪ್ಪರ್ಗಳ ಮೂಲಕ ಜಲ್ಲಿ ಹಾಗೂ ಟಾರ್ ಮಿಕ್ಸ್ಅನ್ನು ಬೇರೆಡೆಗೆ ಸಾಗಿಸಲಾಗುತ್ತದೆ.
ಟಮಕದಲ್ಲಿ ಟಾರ್ ಹಾಗೂ ಜಲ್ಲಿ ಮಿಶ್ರಣ ಮಾಡುವ ವೇಳೆ ಭಾರಿ ಪ್ರಮಾಣದಲ್ಲಿ ಕೆಮಿಕಲ್ಯುಕ್ತ ದಟ್ಟ ಹೊಗೆ ಉತ್ಪತ್ತಿಯಾಗುತ್ತಿದೆ. ಇದು ಬಂಗಾರಪೇಟೆ ಮಾಲೂರು ರಸ್ತೆಯೆಲ್ಲಾ ಆವರಿಸಿರುತ್ತದೆ. ಇದರಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ.
ಅನಾರೋಗ್ಯಕ್ಕೆ ತುತ್ತಾದ ಜನ: ಕೆಮಿಕಲ್ ಮಿಶ್ರಿತ ಹೊಗೆಯು ರಾಮಾಪುರ, ನಾಗಲಾಪುರ, ಕಣಿವೆಕಲ್ಲು, ಅಲ್ಲಿಪುರ ಸೇರಿದಂತೆ ಹಲವು ಗ್ರಾಮಗಳಿಗೆ ವ್ಯಾಪಿಸುತ್ತಿದೆ.
ಜನರಲ್ಲಿ ಉಸಿರಾಟದ ಸಮಸ್ಯೆ, ಕೆಮ್ಮು, ವಾಕರಿಕೆ, ತಲೆನೋವು ಸಮಸ್ಯೆಗಳು ಕಾಡುತ್ತಿವೆ. ಸಾರ್ವಜನಿಕರು ಟಕವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಗ್ರಾಮಸ್ಥರು ತಹಸೀಲ್ದಾರ್ಗೆ ಎಂ. ದಯಾನಂದ್ ಮನವಿ ಸಲ್ಲಿಸಿದ್ದರಿಂದ ಅವರು ಸ್ಥಳ ಪರಿಶೀಲಿಸಿ ತಾತ್ಕಾಲಿಕವಾಗಿ ಮುಚ್ಚುವಂತೆ ತಿಳಿಸಿದ್ದಾರೆ. ಗ್ರಾಮಗಳ ಜನರ ಆರೋಗ್ಯ ಕಾಪಾಡಲು ಶ್ರೀವಾಗಿ ಟಕವನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.
ಟಮಕದಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ತಿಳಿಸಿ ತಾತ್ಕಾಲಿಕವಾಗಿ ಮುಚ್ಚುವಂತೆ ತಿಳಿಸಲಾಗಿದೆ.
| ಎಂ.ದಯಾನಂದ್, ತಹಸೀಲ್ದಾರ್, ಬಂಗಾರಪೇಟೆದಟ್ಟ ಹೊಗೆಯಿಂದ ಅಲ್ಲಿನ ಜನರಿಗೆ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ತಹಸೀಲ್ದಾರರು ದೂರವಾಣಿ ಮೂಲಕ ತಿಳಿಸಿದ್ದಾರೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಟಕ ಸ್ಥಳಾಂತರಿಸುವ ಕ್ರಮಕೈಗೊಳ್ಳಲಾಗುತ್ತದೆ.
| ಬಿ.ಸಿ.ಶಿವಮೂರ್ತಿ, ಉಪ ಪರಿಸರ ಅಧಿಕಾರಿ, ಕೋಲಾರ