More

    ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರಾೃಕ್ಟರ್‌ಗಳು ಪೊಲೀಸರ ವಶಕ್ಕೆ

    ರಾಣೆಬೆನ್ನೂರ: ತಾಲೂಕಿನ ಹೊಳೆಆನ್ವೇರಿ ಗ್ರಾಮದ ಬಳಿಯ ತುಂಗಭದ್ರಾ ನದಿಪಾತ್ರದಿಂದ ಟ್ರಾೃಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
    ಗ್ರಾಮದ ನವೀನ ನಾಗನಗೌಡ ಪಾಟೀಲ, ಸಿದ್ದಪ್ಪ ಗುಡ್ಡಪ್ಪ ಯಡಗೋಡಿ ಬಂಧಿತ ಆರೋಪಿಗಳು.
    ಇವರು ಗ್ರಾಮದ ಬಳಿಯ ತುಂಗಭದ್ರಾ ನದಿಪಾತ್ರದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದರು. ಈ ಸಮಯದಲ್ಲಿ ಡಿವೈಎಸ್‌ಪಿ ಡಾ. ಗಿರೀಶ ಭೋಜಣ್ಣನವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಗಳಿಂದ 5400 ರೂ. ಮೌಲ್ಯದ 6 ಕ್ಯೂಬಿಕ್ ಮರಳನ್ನು ವಾಹನಗಳ ಸಮೇತ ವಶಪಡಿಸಿಕೊಂಡಿದ್ದಾರೆ.
    ಹಲಗೇರಿ ಪೊಲೀಸ್ ಠಾಣೆಯ ಎಎಸ್‌ಐ ಎಸ್.ಡಿ. ಕುರಿಯವರ, ಡಿವೈಎಸ್ಪಿ ಕಚೇರಿ ಅಪರಾಧ ದಳದ ಎಲ್.ಎಸ್. ಪಾಟೀಲ, ಎಂ.ಆರ್. ಈಳಿಗೇರ, ಎಂ.ಪಿ. ಕೊಪ್ಪದ ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts