More

    ನಿರ್ಭಯವಾಗಿ ನಡೆಯುತ್ತಿದೆ ಅಭಯಾರಣ್ಯಗಳಲ್ಲಿ ಕಳ್ಳಬೇಟೆ: ಲಾಕ್​ಡೌನ್ ವರದಾನವಾಯಿತೆ?

    ಬೆಂಗಳೂರು: ಇದು ಲಾಕ್​ಡೌನ್ ಸಮಯ. ರಸ್ತೆಗಳಲ್ಲಿ ಜನರ ಓಡಾಟ ಕಡಿಮೆಯಾಗಿ ಪ್ರಾಣಿ, ಪಕ್ಷಿಗಳು ಕಾಡು, ಗೂಡು ಬಿಟ್ಟು ಸ್ವಚ್ಛಂದವಾಗಿ ತುಸು ಹೊತ್ತು ಊರಿನತ್ತಲೂ ಸುಳಿದಾಡುತ್ತಿವೆ. ಆದರೆ ಆತಂಕಕಾರಿ ಸಂಗತಿ ಎಂದರೆ ಲಾಕ್​ಡೌನ್ ನ ಈ ಸಮಯ ಕಾಡು ಪ್ರಾಣಿಗಳ್ಳರಿಗೆ ವರದಾನವಾದಂತಿದೆ.
    ಅಭಯಾರಣ್ಯಗಳಲ್ಲಿ ಬೇಟೆಗಾರರು ಯತೇಚ್ಛವಾಗಿ ಕಳ್ಳಬೇಟೆಯಾಡುತ್ತಿದ್ದು, ಇತ್ತೀಚೆಗೆ ವರದಿಯಾದ ಕಳ್ಳಬೇಟೆ ಪ್ರಕಟಣೆಗಳೇ ಇದಕ್ಕೆ ಸಾಕ್ಷಿಯಾಗಿವೆ.

    ಇದನ್ನೂ ಓದಿ: ಮೂತ್ರಪಿಂಡ ದಾನಿಗಳನ್ನು ಒದಗಿಸುದಾಗಿ ಹೇಳಿ ಹಣ ವಸೂಲಿ ಮಾಡುತ್ತಿದ್ದವ ಏನಾದ?

    ಲಾಕ್​​ಡೌನ್ ಜಾರಿಯಾಗಿದ್ದಾಗ ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಬೇಟೆಯಾಡಿದ 8 ಪ್ರಕರಣಗಳು ದಾಖಲಾಗಿದ್ದವು. ಇದೀಗ ಮತ್ತೆ ಲಾಕ್ ಡೌನ್ ಜಾರಿಯಾಗಿರುವುದರಿಂದ ಅರಣ್ಯಾಧಿಕಾರಿಗಳು ಎಚ್ಚರಿಕೆವಹಿಸಬೇಕಾಗಿದೆ.
    ಇತ್ತೀಚೆಗೆ ಅರಣ್ಯಾಧಿಕಾರಿಗಳಿಳು ಮಾಹಿತಿಯೊಂದರ ಆಧಾರದ ಮೇಲೆ ವೀರನಹೊಸಳ್ಳಿ ವಲಯದ ಒಂದು ಮನೆ ಮೇಲೆ ದಾಳಿ ನಡೆಸಿದಾಗ ಅಲ್ಲಿ ಸಾಂಬಾರ್ ಜಿಂಕೆಯ ಅಂಗಗಳು ಸಿಕ್ಕಿವೆಯಾದರೂ ಕಳ್ಳಬೇಟೆಯಾಡಿದ ಆರೋಪಿಗಳು ಸಿಕ್ಕಿಲ್ಲ. ಬೆಂಗಳೂರಿನಲ್ಲಿರುವ ಈ ಸ್ಥಳದ ಮಾಲೀಕರು ಲಾಕ್ ಡೌನ್ ನಿಂದಾಗಿ ಓಡಾಡಲು ಅಸಾಧ್ಯವಾಗಿರುವುದರಿಂದ ಈ ಸ್ಥಳ ಕಳ್ಳರಿಗೆ ವರದಾನವಾದಂತಾಗಿದೆ.

    ಇದನ್ನೂ ಓದಿ: 75 ಜನರ ಪ್ರಾಣ ಉಳಿಸಿದ ಪೈಲಟ್‌ ಸಮಯಪ್ರಜ್ಞೆ

    ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಗುಪ್ತಚರ ಮಾಹಿತಿಯಾಧಾರದ ಮೇಲೆ ಅರಣ್ಯಾಧಿಕಾರಿಗಳು ಆ ಸ್ಥಳ ತಲುಪುವಷ್ಟೊತ್ತಿಗೆ ಸಾಂಬಾರ ಜಿಂಕೆಯೊಂದಿಗೆ ಬೇಟೆಗಾರರು ಅಲ್ಲಿಂದ ಪರಾರಿಯಾಗಿದ್ದಾರೆ.
    ಈ ಬಗ್ಗೆ ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ ನಾಗರಹೊಳೆ ಹುಲಿ ಅಭಯಾರಣ್ಯ ನಿರ್ದೇಶಕ ಮಹೇಶ್ ಕೆ, ಎಲ್ಲಾ ಮೂಲಗಳಿಂದ ಮಾಹಿತಿ ಪಡೆಯುತ್ತಿದ್ದು, ಶೀಘ್ರ ಬೇಟೆಗಾರರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    VIDEO: ‘ಚೀನಾದವ್ರು ಯೋಚ್ನೆ ಮಾಡದೇ ಏನೂ ಮಾಡಲ್ಲಾರಿ’- ರಾಹುಲ್ ಗಾಂಧಿ ವಿವರಿಸ್ತಿದ್ದಾರೆ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts