More

    ‘ಒಮ್ಮೆ ಯುದ್ಧ ಶುರುವಾದರೆ ಭಾರತಕ್ಕೆ ಸೋಲು ನಿಶ್ಚಿತ’- ಮತ್ತೆ ಬೆಂಕಿಗೆ ತುಪ್ಪ ಸುರಿದ ಚೀನಾ

    ನವದೆಹಲಿ: ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಕ್ಕೆ ಹೋಗಿರುವ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು, ಅಲ್ಲಿ ಚೀನಾದ ರಕ್ಷಣಾ ಸಚಿವ ಜನರಲ್​ ವೈ ಫೆಂಗಿ ಅವರನ್ನು ಭೇಟಿಯಾಗಿದ್ದಾರೆ.

    ವಾಸ್ತವಿಕ ಗಡಿ ನಿಯಂತ್ರಣಾ ರೇಖೆ ಬಳಿ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ವೇಳೆ ರಾಜನಾಥ್​ ಸಿಂಗ್​ ಅವರು ಚೀನಾ ಅಂತಾರಾಷ್ಟ್ರೀಯ ಗಡಿಯಲ್ಲಿ ಶಿಸ್ತು ಪಾಲನೆ ಮಾಡಬೇಕು. ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾವಣೆ ಮಾಡಲು ಮುಂದಾಗಬಾರದು ಎಂದೂ ಖಡಕ್​ ಆಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇಷ್ಟೆಲ್ಲ ಆದಮೇಲೆ ಕೂಡ ಚೀನಾ ಯುದ್ಧದ ಬಗ್ಗೆ ಮಾತನಾಡುತ್ತಿದೆ. ಒಂದೊಮ್ಮೆ ಯುದ್ಧ ಶುರುವಾದರೆ ಭಾರತಕ್ಕೆ ಗೆಲ್ಲುವ ಅವಕಾಶವೇ ಇಲ್ಲ ಎಂದು ಅಲ್ಲಿನ ಮಾಧ್ಯಮವೊಂದು ವಿಶ್ಲೇಷಿಸಿದೆ. ಇದನ್ನೂ ಓದಿ: ವೈದ್ಯ ವೃತ್ತಿ ಬಿಟ್ಟು ಆಟೋ ಚಾಲಕರಾದ್ರು​: ಐಎಎಸ್​ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ!

    ಚೀನಾದ ರಾಷ್ಟ್ರೀಯತೆಯ ಶಕ್ತಿ, ಸೇನಾ ಶಕ್ತಿಗಳು ಭಾರತಕ್ಕಿಂತ ಪ್ರಬಲವಾಗಿವೆ ಎಂಬುದನ್ನು ನಾವು ಮತ್ತೊಮ್ಮೆ ನೆನಪಿಸಲು ಬಯಸುತ್ತೇವೆ. ಭಾರತ ಮತ್ತು ಚೀನಾ ಎರಡೂ ದೇಶಗಳು ಮಹಾನ್​ ಶಕ್ತಿಗಳೇ ಆಗಿದ್ದರೂ ಕೂಡ, ಯುದ್ಧ ಎಂದು ಕೊನೆಯ ಸ್ಪರ್ಧೆಗೆ ಬಂದಾಗ ಭಾರತ ಖಂಡಿತ ಸೋಲುತ್ತದೆ. ಒಂದೊಮ್ಮೆ ಗಡಿಯುದ್ಧ ಶುರುವಾದರೆ ಭಾರತ ಗೆಲ್ಲಲು ಅವಕಾಶವೇ ಇಲ್ಲ ಎಂದು ಚೀನಾ ಸರ್ಕಾರದ ಮುಖವಾಣಿ, ಪ್ರಮುಖ ಮಾಧ್ಯಮ ಗ್ಲೋಬಲ್​ ಟೈಮ್ಸ್​ ತನ್ನ ಸಂಪಾದಕೀಯದಲ್ಲಿ ಬರೆಯಲಾಗಿದೆ.

    ರಷ್ಯಾದಲ್ಲಿ ಎರಡೂ ದೇಶಗಳ ರಕ್ಷಣಾ ಮಂತ್ರಿಗಳೂ ಭೇಟಿಯಾಗಿ 2 ತಾಸಿಗೂ ಅಧಿಕ ಕಾಲ ಚರ್ಚೆ ನಡೆಸಿರುವುದು ಉಭಯ ದೇಶಗಳ ಪಾಲಿಗೆ ಮಹತ್ವದ ತಿರುವು. ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಎರಡೂ ದೇಶಗಳೂ ಪ್ರಯತ್ನ ಮಾಡುತ್ತವೆ ಎಂಬ ನಂಬಿಕೆ ಇದೆ ಎಂದೂ ಸಂಪಾದಕೀಯದಲ್ಲಿ ಬರೆಯಲಾಗಿದೆ. (ಏಜೆನ್ಸೀಸ್​)

    ಮೃತ ನಟ ಸುಶಾಂತ್​ ಸಿಂಗ್​ ರಜಪೂತ್​ ಮನೆಯ ಕೆಲಸದವನು ಅರೆಸ್ಟ್​…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts