ನವದೆಹಲಿ: ಹೆಂಡತಿ ತನ್ನ ಮೇಲೆ ಪೊಲೀಸರಿಗೆ ದೂರು ನೀಡಿದಳೆಂದು ಬಂದೂಕಿನಿಂದ ಹಲ್ಲೆ ನಡೆಸುತ್ತಿದ್ದ ಗಂಡನನ್ನು ಸರಿಯಾದ ಸಮಯಕ್ಕೆ ತಡೆದಿರುವ ಸಿನಿಮೀಯ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧವಾಗಿ, ವಾಯುವ್ಯ ದೆಹಲಿಯ ಮಂಗೋಲ್ಪುರಿ ಯು-ಬ್ಲಾಕ್ನ ನಿವಾಸಿಯಾದ 27 ವರ್ಷದ ಮೋಹಿತ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಮೋಹಿತ್ ಮತ್ತು ಮೊನಿಕಾ ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ವಿವಾದದಿಂದಾಗಿ ಆಕೆ ಮಂಗೋಲ್ಪುರಿಯ ಎಸ್-ಬ್ಲಾಕ್ನಲ್ಲಿದ್ದ ತವರುಮನೆಯಲ್ಲಿ ವಾಸಿಸುತ್ತಿದ್ದಳು. ಬುಧವಾರ ಬೆಳಿಗ್ಗೆ 9 ಗಂಟೆಗೆ ಮೊನಿಕಾ ಗಂಡ ತನ್ನೊಡನೆ ಜಗಳವಾಡುತ್ತಿದ್ದಾನೆ ಎಂದು ಪೊಲೀಸರಿಗೆ ಫೋನು ಮಾಡಿದ್ದಳು. ಮಧ್ಯಾಹ್ನ 2 ಗಂಟೆಗೆ ರಾಜ್ ಪಾರ್ಕ್ ಪೊಲೀಸ್ ಠಾಣೆ ತಲುಪಿ ಗಂಡನ ವಿರುದ್ಧ ದೂರು ನೀಡಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: ಆಸ್ತಿಗಾಗಿ ಮಗನನ್ನು ಕಾಲುವೆಗೆ ನೂಕಿ ಕೊಂದಿದ್ದ ತಂದೆಗೆ ಜೈಲಲ್ಲಿ ಕಾದುಕುಳಿತಿದ್ದ ಯಮರಾಯ!
ಈ ಸಂಬಂಧವಾಗಿ ಪೊಲೀಸರು ಮೋಹಿತ್ಗೆ ಕರೆ ಮಾಡಿದಾಗ ಆತ ಮನೆಯಿಂದ ಹೊರಗಿದ್ದು, ಸಂಜೆ ವೇಳೆಗೆ ತಲುಪುವುದಾಗಿ ಹೇಳಿದ್ದಾನೆ. ಆದರೆ ಸಂಜೆ 4 ಗಂಟೆಗೆ ಮೊನಿಕಾ ಪೊಲೀಸರಿಗೆ ಮತ್ತೆ ಕರೆ ಮಾಡಿ, ಗಂಡ ಮೋಹಿತ್ ತನ್ನ ಮನೆಗೆ ಬಂದಿದ್ದಾನೆ ಎಂದು ತಿಳಿಸಿದ್ದಾಳೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ, ಮೋಹಿತ್ ಕೈಯಲ್ಲಿ ಗನ್ನು ಹಿಡಿದುಕೊಂಡಿದ್ದ. ಮೊನಿಕಾ ಕೂಗಿಕೊಳ್ಳುತ್ತಿದ್ದಳು. ಅಕ್ಕಪಕ್ಕದವರ ಸಹಾಯದಿಂದ ಆತನ ಕೈಯಿಂದ ಗನ್ ಕಿತ್ತುಕೊಂಡ ಪೊಲೀಸರು, ಆತನನ್ನು ಬಂಧಿಸಿದರು ಎಂದು ಡಿಸಿಪಿ ಪರ್ವಿಂದರ್ ಸಿಂಗ್ ತಿಳಿಸಿದ್ದಾರೆ.
ಮೊನಿಕಾ ಪೊಲೀಸರಿಗೆ ಸಲ್ಲಿಸಿದ್ದ ದೂರನ್ನು ವಾಪಸ್ ಪಡೆಯಬೇಕೆಂದು ಆರೋಪಿ ಮೋಹಿತ್ ಅವಳ ಮೇಲೆ ಗುಂಡು ಹಾರಿಸಿದ್ದ. ಆಕೆಗೆ ಗುಂಡು ತಗುಲದೆ, ಅದೃಷ್ಟವಶಾತ್ ಬಚಾವಾದಳು ಎನ್ನಲಾಗಿದೆ. ಮೊನಿಕಾಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ ಪೊಲೀಸರು, ಮೋಹಿತ್ನನ್ನು ಬಂಧನದಲ್ಲಿಟ್ಟಿದ್ದಾರೆ. ಆತನ ಮೇಲೆ ಎಫ್ಐಆರ್ ದಾಖಲಿಸಿ, ಗನ್ ಹೇಗೆ ಪಡೆದುಕೊಂಡ ಎಂದು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)
ಮಗನ ಅಗಲಿಕೆ ತಾಳಲಾರದೆ, ಅವನ ದಾರಿಯಲ್ಲೇ ನಡೆದ ತಾಯಿ! ಇದು ಮನ ಕಲಕುವ ಘಟನೆ
ಕಾಲಿನ ನರಗಳ ಸೆಳೆತ ಮತ್ತು ಬೊಜ್ಜು ನಿವಾರಕ, ಈ ಆಸನ! ಋತುಚಕ್ರದ ದೋಷವನ್ನೂ ಪರಿಹರಿಸುತ್ತದೆ!