ಹಾಸನ: ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಪ್ರವಾಸದಲ್ಲಿರುವ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಸಿದ್ದರಾಮಯ್ಯ ಅವರೇ ಹೌದು ಹುಲಿಯಾ ಎಂದು ಕರೆದವರೇ ನಿಮ್ಮನ್ನು ಝೂನಲ್ಲಿ ಇರಲು ಫಿಟ್ ಆದ ವ್ಯಕ್ತಿ ಎಂದು ಭಾವಿಸಿದ್ದಾರೆ. ಆದ್ದರಿಂದ ನಿಮ್ಮನ್ನು ಅಧಿಕಾರದಿಂದ ಹೊರಗಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಪುರಾತನ ಇತಿಹಾಸ ಹೊಂದಿರುವ ಪಕ್ಷ. ಜನರಿಗೆ ಆದರ್ಶವಾಗಿ ಇರಬೇಕಾದ ಪಕ್ಷ. ಆದರೆ ಇಂದು ಕೋವಿಡ್-19 ಪಿಡುಗಿನ ಸಮಯದಲ್ಲಿ ಆ ಪಕ್ಷದವರು ಚಿಲ್ಲರೆ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಕಿಟ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ಆರೋಪಿಸುತ್ತಿದ್ದೀರ. ನಿಮ್ಮ ಆಡಳಿತಾವಧಿಯಲ್ಲಿ ಖರೀದಿಸಿದ ಕಿಟ್ ಮತ್ತು ವೆಂಟಿಲೇಟರ್ಗಳು ಎಲ್ಲಿ ಹೋದವು? ಇಂದಿನ ಈ ಸ್ಥಿತಿಗೆ ನೀವೇ ಕಾರಣ ಅಲ್ಲವೇ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರನ್ನೂ ಪ್ರಶ್ನಿಸಿದ್ದಾರೆ.
ನಮ್ಮಿಂದ ಸಣ್ಣಪುಟ್ಟ ತಪ್ಪಾಗಿರಬಹುದು. ಅದು ಸಹಜ ಕೂಡ. ಟೀಕೆ ಮಾಡೋದಾದರೆ ವಿಧಾನಸೌಧ ಇದೆ. ಅಲ್ಲಿ ಬಂದು ಟೀಕೆ ಮಾಡಿ. ಬೇಡ ಎಂದವರು ಯಾರು? ಆದರೆ ಈ ರೀತಿ ಅನಗತ್ಯವಾಗಿ ಗಲಾಟೆ ಮಾಡಿ ಜನರನ್ನು ಭಯಗೊಳಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಧೂಮಪಾನಿಗಳೇ ಹುಷಾರ್: ಧೂಮಪಾನದಿಂದ ಕರೊನಾ ತಗುಲಿ ಬೇಗ ಸಾವು ಸಂಭವಿಸುತ್ತದೆ : ಆರೋಗ್ಯ ಸಚಿವಾಲಯ
ರಾಷ್ಟ್ರದಲ್ಲಿ ಮೊದಲು ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದವರು ಕಾಂಗ್ರೆಸ್ನ ಇಂದಿರಾ ಗಾಂಧಿ ಅವರು. ಬಹುಮತ ಇದ್ದರೂ 20ಕ್ಕೂ ಹೆಚ್ಚು ರಾಜ್ಯ ಸರ್ಕಾರಗಳಿಂದ ಅಧಿಕಾರ ಕಿತ್ತುಕೊಂಡು ತುರ್ತು ಪರಿಸ್ಥಿತಿ ಜಾರಿ ಮಾಡಿದವರು ಅವರು. ಈ ಇತಿಹಾಸವನ್ನು ನೀವು ಮರೆಯಬಾರದು ಎಂದು ಸಲಹೆ ನೀಡಿದ್ದಾರೆ.
ನೀವು ಜನತಾದಳದಲ್ಲಿ ಇದ್ದವು. ಆದರೆ, ನೀವೇ ಕಾಂಗ್ರೆಸ್ಗೆ ಪಕ್ಷಾಂತರ ಮಾಡಿದಿರು. ಜನತಾದಳದಿಂದ ಶಾಸಕರನ್ನು ಕಾಂಗ್ರೆಸ್ಗೆ ಸೆಳೆದಿರಿ. ಮಾಯಾವತಿ ಅವರ ಶಾಸಕರನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಂಡಿರಿ. ಆದರೆ, ನಿಮ್ಮ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರಬಂದವರನ್ನು ನಾವು ನಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದೀವಿ. ನೀವು ಮಾಡಿದ್ದು ಪ್ರಜಾಪ್ರಭುತ್ವದ ಕೊಲೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಚಪಾತಿ ತಿಂದು ಜಡ್ಜ್ ಮತ್ತವರ ಮಗನ ಸಾವಿನ ಪ್ರಕರಣಕ್ಕೆ ಬೆಚ್ಚಿಬೀಳಿಸುವ ಟ್ವಿಸ್ಟ್; ಎಲ್ಲಿ ಹೋಗಿ ತಲುಪತ್ತೆ ಕೇಸ್?