More

    ಹೌದು ಹುಲಿಯಾ! ನೀವು ಝೂನಲ್ಲೇ ಇರಲು ಲಾಯಕ್ಕು ಹುಲಿಯಾ!

    ಹಾಸನ: ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಪ್ರವಾಸದಲ್ಲಿರುವ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಸಿದ್ದರಾಮಯ್ಯ ಅವರೇ ಹೌದು ಹುಲಿಯಾ ಎಂದು ಕರೆದವರೇ ನಿಮ್ಮನ್ನು ಝೂನಲ್ಲಿ ಇರಲು ಫಿಟ್​ ಆದ ವ್ಯಕ್ತಿ ಎಂದು ಭಾವಿಸಿದ್ದಾರೆ. ಆದ್ದರಿಂದ ನಿಮ್ಮನ್ನು ಅಧಿಕಾರದಿಂದ ಹೊರಗಿಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್​ ಪಕ್ಷ ಪುರಾತನ ಇತಿಹಾಸ ಹೊಂದಿರುವ ಪಕ್ಷ. ಜನರಿಗೆ ಆದರ್ಶವಾಗಿ ಇರಬೇಕಾದ ಪಕ್ಷ. ಆದರೆ ಇಂದು ಕೋವಿಡ್​-19 ಪಿಡುಗಿನ ಸಮಯದಲ್ಲಿ ಆ ಪಕ್ಷದವರು ಚಿಲ್ಲರೆ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಇಂದು ಕಿಟ್​ ಇಲ್ಲ, ವೆಂಟಿಲೇಟರ್​ ಇಲ್ಲ ಎಂದು ಆರೋಪಿಸುತ್ತಿದ್ದೀರ. ನಿಮ್ಮ ಆಡಳಿತಾವಧಿಯಲ್ಲಿ ಖರೀದಿಸಿದ ಕಿಟ್​ ಮತ್ತು ವೆಂಟಿಲೇಟರ್​ಗಳು ಎಲ್ಲಿ ಹೋದವು? ಇಂದಿನ ಈ ಸ್ಥಿತಿಗೆ ನೀವೇ ಕಾರಣ ಅಲ್ಲವೇ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ಇಬ್ಬರನ್ನೂ ಪ್ರಶ್ನಿಸಿದ್ದಾರೆ.

    ನಮ್ಮಿಂದ ಸಣ್ಣಪುಟ್ಟ ತಪ್ಪಾಗಿರಬಹುದು. ಅದು ಸಹಜ ಕೂಡ. ಟೀಕೆ ಮಾಡೋದಾದರೆ ವಿಧಾನಸೌಧ ಇದೆ. ಅಲ್ಲಿ ಬಂದು ಟೀಕೆ ಮಾಡಿ. ಬೇಡ ಎಂದವರು ಯಾರು? ಆದರೆ ಈ ರೀತಿ ಅನಗತ್ಯವಾಗಿ ಗಲಾಟೆ ಮಾಡಿ ಜನರನ್ನು ಭಯಗೊಳಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಧೂಮಪಾನಿಗಳೇ ಹುಷಾರ್: ಧೂಮಪಾನದಿಂದ ಕರೊನಾ ತಗುಲಿ ಬೇಗ ಸಾವು ಸಂಭವಿಸುತ್ತದೆ : ಆರೋಗ್ಯ ಸಚಿವಾಲಯ

    ರಾಷ್ಟ್ರದಲ್ಲಿ ಮೊದಲು ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದವರು ಕಾಂಗ್ರೆಸ್​ನ ಇಂದಿರಾ ಗಾಂಧಿ ಅವರು. ಬಹುಮತ ಇದ್ದರೂ 20ಕ್ಕೂ ಹೆಚ್ಚು ರಾಜ್ಯ ಸರ್ಕಾರಗಳಿಂದ ಅಧಿಕಾರ ಕಿತ್ತುಕೊಂಡು ತುರ್ತು ಪರಿಸ್ಥಿತಿ ಜಾರಿ ಮಾಡಿದವರು ಅವರು. ಈ ಇತಿಹಾಸವನ್ನು ನೀವು ಮರೆಯಬಾರದು ಎಂದು ಸಲಹೆ ನೀಡಿದ್ದಾರೆ.

    ನೀವು ಜನತಾದಳದಲ್ಲಿ ಇದ್ದವು. ಆದರೆ, ನೀವೇ ಕಾಂಗ್ರೆಸ್​ಗೆ ಪಕ್ಷಾಂತರ ಮಾಡಿದಿರು. ಜನತಾದಳದಿಂದ ಶಾಸಕರನ್ನು ಕಾಂಗ್ರೆಸ್​ಗೆ ಸೆಳೆದಿರಿ. ಮಾಯಾವತಿ ಅವರ ಶಾಸಕರನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಂಡಿರಿ. ಆದರೆ, ನಿಮ್ಮ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರಬಂದವರನ್ನು ನಾವು ನಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದೀವಿ. ನೀವು ಮಾಡಿದ್ದು ಪ್ರಜಾಪ್ರಭುತ್ವದ ಕೊಲೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಚಪಾತಿ ತಿಂದು ಜಡ್ಜ್​ ಮತ್ತವರ ಮಗನ ಸಾವಿನ ಪ್ರಕರಣಕ್ಕೆ ಬೆಚ್ಚಿಬೀಳಿಸುವ ಟ್ವಿಸ್ಟ್​; ಎಲ್ಲಿ ಹೋಗಿ ತಲುಪತ್ತೆ ಕೇಸ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts