More

    ಹುಕ್ಕೇರಿ ಉತ್ಸವಕ್ಕೆ ಡಿಕೆಶಿಗೆ ಆಮಂತ್ರಣ

    ಹುಕ್ಕೇರಿ: ಸ್ಥಳೀಯ ಹಿರೇಮಠದ ದಸರಾ ಉತ್ಸವ ಅ.15 ರಿಂದ 24ರ ವರೆಗೆ ಜರುಗಲಿದ್ದು, 18ರಂದು ಜರುಗಲಿರುವ ನೊಣವಿನಕೇರಿ ಡಾ.ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳಿಗೆ ರೇಣುಕ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಗಮಿಸುವುದಾಗಿ ತಿಳಿಸಿದ್ದಾರೆ.

    ಈಚೆಗೆ ಬೆಳಗಾವಿಗೆ ಆಗಮಿಸಿದ್ದ ಶಿವಕುಮಾರ ಅವರನ್ನು ಭೇಟಿಯಾದ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು, ಶ್ರೀಮಠ, ದಸರಾ ಮಹೋತ್ಸವದ ಇತಿಹಾಸ ವಿವರಿಸಿ, ಸಮಾರಂಭಕ್ಕೆ ಆಗಮಿಸುವಂತೆ ಕೋರಿದರು. ಶ್ರೀಗಳ ಆಹ್ವಾನಕ್ಕೆ ಓಗೊಟ್ಟ ಡಿ.ಕೆ.ಶಿವಕುಮಾರ ಆಗಮಿಸುವುದಾಗಿ ತಿಳಿಸಿದರು.

    ಹುಕ್ಕೇರಿ ಹಿರೇಮಠದ ಬಗ್ಗೆ ನಾವು ತುಂಬ ಕೇಳಿದ್ದೇವೆ. ಬೆಳಗಾವಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಗೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದಿದ್ದೇವೆ. ಈಗ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಭಾಗ್ಯ ನನಗೆ ಒದಗಿಬಂದಿದೆ. ನಾನು ಆರಾಸುವ ನೊಣವಿನಕೇರಿ ಡಾ.ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳಿಗೆ ಪ್ರತಿಷ್ಠಿತ ರೇಣುಕ ಶ್ರೀ ಪ್ರಶಸ್ತಿ ನೀಡುತ್ತಿರುವುದುದು ಅತೀವ ಸಂತೋಷ ತಂದಿದೆ ಎಂದರು.

    ಶಾಸಕ ಅಶೋಕ ಪಟ್ಟಣ, ಶಾಸಕಿ ಶಶಿಕಲಾ ಜೊಲ್ಲೆ, ಕಾಂಗ್ರೆಸ್ ಧುರೀಣ ಆನಂದ ಗಡ್ಡದೇವರಮಠ, ಶೀತಲ ಬ್ಯಾಳಿ, ಸುರೇಶ ಜಿನರಾಳಿ, ಚನ್ನಪ್ಪ ಗಜಬರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts