ಮಂಡ್ಯ: ಮಂಡ್ಯದಲ್ಲಿ ನಟ ಹುಚ್ಚ ವೆಂಕಟ್ ಪುಂಡಾಟ ಮುಂದುವರಿದಿದ್ದು, ಯುವಕರನ್ನು ಹೀಯಾಳಿಸಿದ್ದಕ್ಕೆ ಹುಚ್ಚಾ ವೆಂಕಟ್ಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿಯ ಟೀ ಅಂಗಡಿ ಬಳಿ ನಿಂತಿದ್ದ ಹುಚ್ಚಾ ವೆಂಕಟ್ರನ್ನು ಯುವಕರು ಮಾತನಾಡಿಸಲು ಬಂದಾಗ, ಯುವಕರನ್ನು ವೆಂಕಟ್ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರಕ್ಕೊಳಗಾಗಿದ್ದ ಗರ್ಭಿಣಿ ಮಹಿಳೆಗೆ ಕರೊನಾ: ಪೊಲೀಸ್, ವೈದ್ಯ, ಜಡ್ಜ್ಗೂ ಕ್ವಾರಂಟೈನ್ ಸಂಕಷ್ಟ
ಹುಚ್ಚಾ ವೆಂಕಟ್ನ ಕಿರಿಕಿರಿಗೆ ಬೇಸತ್ತ ಯುವಕರು ಕಾಲಿನಡಿ ಹಾಕಿ ತುಳಿದಿದ್ದಾರೆ. ಸ್ಥಳದಲ್ಲಿದ್ದವರು ಯುವಕರಿಂದ ಹುಚ್ಚಾ ವೆಂಕಟ್ರನ್ನು ಬಿಡಿಸಿ ಸಮಾಧಾನ ಮಾಡಿದ್ದಾರೆ. ಬಳಿಕ ಹುಚ್ಚಾ ವೆಂಕಟ್ ಬೆಂಗಳೂರು ಕಡೆಗೆ ತೆರಳಿದರು.
ಹೀಯಾಳಿಸಿದ್ದಕ್ಕೆ ಹುಚ್ಚಾ ವೆಂಕಟ್ರನ್ನು ಹಿಗ್ಗಾಮುಗ್ಗಾ ಥಳಿಸಿದ ಯುವಕರು
ಮಂಡ್ಯದಲ್ಲಿ ನಟ ಹುಚ್ಚ ವೆಂಕಟ್ ಪುಂಡಾಟ ಮುಂದುವರಿದಿದ್ದು, ಯುವಕರನ್ನು ಹೀಯಾಳಿಸಿದ್ದಕ್ಕೆ ಹುಚ್ಚಾ ವೆಂಕಟ್ಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ.#HucchaVenkat #Mandya #Assault #Youth
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಜೂನ್ 11, 2020