More

    ಗಣೇಶ ಹಬ್ಬ ಹಿನ್ನೆಲೆ ರೌಡಿ ಪರೇಡ್​

    ಹುಬ್ಬಳ್ಳಿ: ಗಣೇಶೋತ್ಸವ ಹಿನ್ನೆಲೆಯಲ್ಲಿ ಎಪಿಎಂಸಿ&- ನವನಗರ ಠಾಣೆ ಪೊಲೀಸರು ಭಾನುವಾರ ರೌಡಿ ಪರೇಡ್​ ನಡೆಸಿದರು. ಹಬ್ಬದ ಸಂದರ್ಭದಲ್ಲಿ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಿದರು.
    ಹಬ್ಬದ ಹಿನ್ನೆಲೆಯಲ್ಲಿ ಇನ್​ಸ್ಪೆಕ್ಟರ್​ ಬಿ.ಎಸ್​. ಮಂಟೂರ ಬೆಳ್ಳಂಬೆಳಗ್ಗೆ ರೌಡಿಗಳನ್ನು ಠಾಣೆಗೆ ಕರೆಸಿದ್ದರು. ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ಪ್ರತ್ಯೇಕವಾಗಿ ಸ್ವವಿವರ ಪಡೆದರು. ಹಬ್ಬದ ಸಂದರ್ಭದಲ್ಲಿ ಶಾಂತಿಗೆ ಭಂಗ ಉಂಟು ಮಾಡಬಾರದು. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು 82 ರೌಡಿಗಳಿಂದ ಮುಚ್ಚಳಿಕೆ ಬರೆಸಿಕೊಂಡರು.
    ಶಾಂತಿ ಸಭೆ :
    ಗಣೇಶ ಹಬ್ಬದ ಅಂಗವಾಗಿ ಠಾಣೆಯಲ್ಲಿ ಭಾನುವಾರ ಶಾಂತಿ ಸಭೆ ನಡೆಸಲಾಯಿತು. ಠಾಣೆ ವ್ಯಾಪ್ತಿಯ ವಿವಿಧ ಧರ್ಮಗಳ ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು. ಶಾಂತಿಯುತವಾಗಿ, ಸರ್ಕಾರದ ಮಾರ್ಗಸೂಚಿಅ ನ್ವಯ ಹಬ್ಬ ಆಚರಿಸಲು ಎಲ್ಲರೂ ಸಹಕರಿಸುವಂತೆ ಇನ್​ಸ್ಪೆಕ್ಟರ್​ ಬಿ.ಎಸ್​.ಮಂಟೂರ ಅವರು ಮನವಿ ಮಾಡಿದರು. ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ, ಪಾಲಿಕೆ ಸಹಾಯಕ ಆಯುಕ್ತ ರಮೇಶ ನೂಲ್ವಿ, ಪಿಎಸ್​ಐಗಳಾದ ಬಿ.ಎನ್​.ಸಾತಣ್ಣವರ, ಆರ್​.ಎಚ್​.ಮಾಣಿಕನವರ, ಟಿ.ಎಸ್​.ತಲವಾಯಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts