More

    ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಡಿ. 8ರಂದು

    ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಮೋಟಾರು ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಒಕ್ಕೂಟದ ಪದಾಧಿಕಾರಿಗಳು ಡಿ. 8ರಂದು ಬೆಳಗ್ಗೆ 9 ಗಂಟೆಗೆ ಬೆಳಗಾವಿಯ ಯಡಿಯೂರಪ್ಪ ಮಾರ್ಗದಿಂದ ಸುವರ್ಣ ಸೌಧದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಆನಂದ ಪಾಟೀಲ ಹೇಳಿದರು.
    ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
    ರಸ್ತೆ ಸುರಕ್ಷತೆ ದೃಷ್ಟಿಯಿಂದ ವಾಹನ ಚಾಲಕರಿಗೆ ಕಲಿಕಾ ಪರವಾನಗಿ ಪರೀಕ್ಷೆಯನ್ನು ಕಡ್ಡಾಯವಾಗಿ ವಾಹನ ಚಾಲನಾ ತರಬೇತಿ ಶಾಲೆಗಳಲ್ಲಿಯೇ ನಡೆಸಲು ಸರ್ಕಾರ ಅನುಮತಿ ನೀಡಬೇಕು. ವಾಹನ ತರಬೇತಿ ಶುಲ್ಕ (ದರಪಟ್ಟಿ) ಹೆಚ್ಚಳ ಮಾಡಬೇಕು. ರಾಜ್ಯದ ಆರ್‌ಟಿಒ, ಒಆರ್‌ಟಿಒ ವ್ಯಾಪ್ತಿಯಲ್ಲಿರುವ ತರಬೇತಿ ಶಾಲೆಗಳ ಆಶ್ರಯದಲ್ಲಿ ಶಿಬಿರಾರ್ಥಿಗಳಿಗೆ ಉತ್ತಮ ತರಬೇತಿ ನೀಡಲು ಡ್ರೈವಿಂಗ್ ಟ್ರಾೃಕ್ ನಿರ್ಮಿಸಲು ಅಗತ್ಯ ಜಮೀನು ನೀಡುವುದು ಸೇರಿ ಇನ್ನಿತರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸುವರ್ಣ ಸೌಧದ ಎದುರು ಅಂದು ಧರಣಿ ನಡೆಸಲಾಗುವುದು ಎಂದರು.
    ಒಕ್ಕೂಟದ ಉಪಾಧ್ಯಕ್ಷ ಯಲ್ಲಪ್ಪ ದೊಡ್ಡಮನಿ, ಬಸವರಾಜ ಕಡ್ಲಿ, ಬಸವರಾಜ ಹಾನಗಲ್ಲ, ಪುಷ್ಪಾಂಜಲಿ ಅರಳಿಕಟ್ಟಿ, ರವೀಂದ್ರ ಹರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts