More

    ಓಣಂ ಉತ್ಸವ 18 ರಂದು: ಕೈರೇಳಿ ಕಲ್ಚರ್ ಅಸೋಸಿಯೇಷನ್ ಅಧ್ಯಕ್ಷ ಎಂ.ಕೆ.ಮಥೈ ಮಾಹಿತಿ

    ಹೊಸಪೇಟೆ: ಓಣಂ ಉತ್ಸವ ಸೆ.18 ರಂದು ಆಚರಿಸಲಾಗುವುದು ಎಂದು ಕೈರೇಳಿ ಕಲ್ಚರ್ ಅಸೋಸಿಯೇಷನ್ ಅಧ್ಯಕ್ಷ ಎಂ.ಕೆ.ಮಥೈ ತಿಳಿಸಿದರು.


    ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಟಿ.ಬಿ.ಡ್ಯಾಂನ ತಿರುಮಲ ಅಯ್ಯಂಗಾರ್ ಸಭಾಂಗಣದಲ್ಲಿ ಬೆಳಗ್ಗೆ 8 ಗಂಟೆಗೆ ಉತ್ಸವ ಆರಂಭವಾಗಲಿದ್ದು, ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಉದ್ಘಾಟಿಸುವರು. ಟಿ.ಬಿ.ಬೋರ್ಡ್ ಕಾರ್ಯದರ್ಶಿ ಜಿ.ನಾಗಮೋಹನ್, ಪಿ.ಕೆ.ಮುರುಗನ್, ಕವಿತಾ ಈಶ್ವರಸಿಂಗ್, ಕನ್ನಡ ವಿವಿ ಪ್ರೊ.ಡಾ.ಕೆ.ಮೋಹನ ಕುಂಟಾರ್ ಪಾಲ್ಗೊಳ್ಳುವರು.

    ಬೆಳಗ್ಗೆ 9 ಗಂಟೆಗೆ ವಿವಿಧ ಸ್ಪರ್ಧೆಗಳು, 11 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ ಓಣಂ ಸಂದ್ಯಾ, 2.30ಕ್ಕೆ ಸಾಂಸ್ಕೃತಿಕ ಸಭೆ, ಸಂಜೆ 7ಕ್ಕೆ ಬಹುಮಾನ ವಿತರಣೆ ನಡೆಯಲಿದ್ದು, ಮಲಯಾಳಿ ಮತ್ತು ಕನ್ನಡ ಸಾಹಿತಿ ಸುಧಾಕರನ್ ರಾಮನಾಥಳ್ಳಿ ಹಾಗೂ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಬಹುಮಾನ ವಿತರಿಸುವರು. ನಂತರ ಮೆಗಾ ಮ್ಯೂಸಿಕಲ್ ನೈಟ್ ನಡೆಯಲಿದೆ ಎಂದರು.


    ಸಂಸ್ಥೆಯ ಸದಸ್ಯರಿಗೆ ಸೆ.17 ರಂದು ಕೇರಂ, ಚೆಸ್, ಮಹಿಳೆಯರಿಗೆ ನಿಂಬೆ ಹಣ್ಣು ಮತ್ತು ಸ್ಪೂನ್, ಮ್ಯೂಸಿಕಲ್ ಚೇರ್, ಬಾಲ್ ಪಾಸಿಂಗ್ ಹಾಗೂ ಮಕ್ಕಳಿಗಾಗಿ ಕಪ್ಪೆ ಜಿಗಿತ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು. ಸಂಸ್ಥೆಯ ಪ್ರಮುಖರಾದ ಮನೋಹರ್ ಪಿಳ್ಳೈ, ಪ್ರಧಾನ ಕಾರ್ಯದರ್ಶಿ ಪಿ.ಸುಂದರ್, ದೇವದಾಸ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts