ಹೊಸಕೋಟೆ: ತಾಲೂಕು ವೈದ್ಯಾಧಿಕಾರಿ ಮಂಜುನಾಥ್ ನಾಪತ್ತೆಯಾಗಿದ್ದು, ಅವರನ್ನ ಪತ್ತೆ ಹಚ್ಚಲು ಪೊಲೀಸ್ ಪಡೆ ಬಿರುಸಿನ ಕಾರ್ಯಾಚರಣೆ ನಡೆಸುತ್ತಿದೆ.
ಟಿಎಚ್ಒ ನಾಪತ್ತೆ ಪ್ರಕರಣ ಸಂಬಂಧ ಗುರುವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ರವಿ ಡಿ. ಚನ್ನಣ್ಣನವರ್, ಡಿಸೆಂಬರ್ 15ರ ಸಂಜೆಯಿಂದ ಆರೋಗ್ಯಾಧಿಕಾರಿ ಮಂಜುನಾಥ್ರ ಫೋನ್ ಸ್ವಿಚ್ಡ್ ಆಪ್ ಹಾಗಿದೆ. ಟಿಎಚ್ಒ ನಾಪತ್ತೆ ಬಗ್ಗೆ ಅವರ ಸಂಬಂಧಿ ನಾಗೇಶ್ ಎಂಬುವರು ಬುಧವಾರ ದೂರು ನೀಡಿದ್ದಾರೆ. ಆರೋಗ್ಯಾಧಿಕಾರಿಯನ್ನು ಪತ್ತೆ ಹಚ್ಚಲು ಹತ್ತು ತಂಡ ರಚಿಸಿದ್ದೇವೆ. ಕ್ಲಿನಿಕ್ಗಳ ದಾಳಿ ಸಂಬಂಧ ಟಿಎಚ್ಒಗೆ ಬೆದರಿಕೆ ಹಾಕಿದ್ದ ಎನ್ನಲಾದ ಜಯರಾಜ್ ಎಂಬಾತನನ್ನು ವಿಚಾರಣೆ ಮಾಡಲಾಗಿದೆ ಎಂದು ಹೇಳಿದರು.
ಇನ್ನು ಟಿಎಚ್ಒ ನಾಪತ್ತೆ ಕೇಸ್ ಬಗ್ಗೆ ‘ದಿಗ್ವಿಜಯ ನ್ಯೂಸ್’ಗೆ ಪ್ರತಿಕ್ರಿಯಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ, ಡಿಸೆಂಬರ್ 9ರಂದು ಆಯುರ್ವೇದ ಸುಜಾತ ಕ್ಲಿನಿಕ್ ಮೇಲೆ ಟಿಎಚ್ಒ ನೇತೃತ್ವದ ತಂಡ ದಾಳಿ ನಡೆಸಿತ್ತು. ಡಿ.11 ರಂದು ಈ ಬಗ್ಗೆ ಟಿಎಚ್ಒ ಮಾಹಿತಿ ನೀಡಿದ್ದರು. ಆಯುರ್ವೇದ ಆಸ್ಪತ್ರೆಯಲ್ಲಿ ಸಂಗ್ರಹಿಸಿದ್ದ 10 ಲಕ್ಷ ಮೌಲ್ಯದ ಅಲೋಪಥಿ ಔಷಧವನ್ನು ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದ್ದರು. ಇದೀಗ ಟಿಎಚ್ಒ ನಾಪತ್ತೆ ಯಾಗಿದ್ದಾರೆ. ಅವರು ಸಿಕ್ಕ ನಂತರ ಕಾರಣ ಸ್ಪಷ್ಟವಾಗಲಿದೆ ಎಂದರು.
ಇನ್ನು ನಕಲಿ ಕ್ಲಿನಿಕ್ ಮೇಲೆ ದಾಳಿ ಮಾಡಿದ್ದ ಟಿಎಚ್ಒಗೆ ಬೆದರಿಕೆ ಹಾಕಿದ್ದ ಜಯರಾಜ್ ಎಂಬಾತ ಎಂಟಿಬಿ ನಾಗರಾಜ್ರ ಆಪ್ತ. ಟಿಎಚ್ಒಗೆ ಜಯರಾಜ್ ಬೆದರಿಕೆ ಹಾಕಿರೋ ಆಡಿಯೋ ವೈರಲ್ ಆಗಿದೆ.
ನಿನ್ನ ಜತೆಗಿನ ಅಕ್ರಮ ಸಂಬಂಧ ಮುರಿದುಕೊಳ್ಳಲು ನಾ ಒಲ್ಲೆ… ಎನ್ನುತ್ತಲೇ ಪ್ರಿಯಕರನ ಜತೆಗೂಡಿ ಏನು ಮಾಡಿದ್ಲು ಗೊತ್ತಾ?
ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದವ ಪಂಚಾಯಿತಿ ಆವರಣದಲ್ಲೇ ಸಾವು!