ಧಾರವಾಡ: ಪಿಎಸ್ಐ ನೇಮಕಾತಿ ಹಗರಣದ ತನಿಖೆ ನಡೆಯುತ್ತಿದೆ. ಹಿರಿಯ ಪೊಲೀಸ್ ಅಽಕಾರಿಗಳೇ ಬಂಽತರಾದ್ದಾರೆ. ಇನ್ನೊಂದೆಡೆ ಹಗರಣದಲ್ಲಿ ಸಿಲುಕಿಕೊಳ್ಳದವರೂ ಇದ್ದಾರೆ. ಅವರಿಗಾಗಿ ಮರುಪರೀಕ್ಷೆ ನಡೆಸಲು ಸರ್ಕಾರ ತೀಮÁðನಿಸಿತ್ತು. ಆದರೆ, ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೀಗಾಗಿ ಹೀಗಾಗಿ ಕೋರ್ಟ್ ನಿರ್ದೇಶನದಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ನಗರದ ಪೊಲೀಸ್ ವರಿಷ್ಠಾಽಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರುಪರೀಕ್ಷೆಯೋ ಅಥವಾ ಬೇರೆ ರೀತಿಯ ಕ್ರಮ ಕೈಗೊಳ್ಳುತ್ತೀರೋ ಎಂದು ಕೋರ್ಟ್ ಕೇಳಿತ್ತು. ಮರುಪರೀಕ್ಷೆ ಮÁಡುತ್ತೇವೆ ಎಂದು ಹೇಳಿದ್ದೇವೆ. ಅದನ್ನು ಕೋರ್ಟ್ ಮÁನ್ಯ ಮÁಡುತ್ತದೆಯೇ ಎಂದು ಕಾಯುತ್ತಿದ್ದೇವೆ. ಮೊದಲು ೫೪೫ ಹುದ್ದೆಗಳ ನೇಮಕಾತಿ ಹಗರಣ ಇತ್ಯರ್ಥ ಆಗಬೇಕಿದೆ. ನಂತರ ೪೦೨ ಹುದ್ದೆಗಳ ನೇಮಕಾತಿಯ ಪರೀಕ್ಷೆ ನಡೆಸಲಾಗುವುದು ಎಂದರು.