ನವದೆಹಲಿ: ಹಿಂದು ಕುಟುಂಬದ ಐವರು ಸದಸ್ಯರ ಮೃತದೇಹವು ಕತ್ತು ಸೀಳಿದ ಸ್ಥಿತಿಯಲ್ಲಿ ನಿಗೂಢವಾಗಿ ಪತ್ತೆಯಾಗಿರುವ ಘಟನೆ ಪಾಕಿಸ್ತಾನದಲ್ಲಿ ಶುಕ್ರವಾರ ನಡೆದಿದ್ದು, ಮೇಲ್ನೋಟಕ್ಕೆ ಕೊಲೆಯಾಗಿದ್ದಾರೆನ್ನಲಾಗಿದೆ.
ಪಾಕ್ ನಗರ ರಹೀಮ್ ಯಾರ್ ಖಾನ್ನಿಂದ 15 ಕಿ.ಮೀ ದೂರವಿರುವ ಅಬುದಾಬಿ ಕಾಲನಿಯಲ್ಲಿನ ನಿವಾಸದಲ್ಲಿ ಐವರ ಮೃತದೇಹ ಪತ್ತೆಯಾಗಿದೆ ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ. ಹರಿತವಾದ ಆಯುಧದಿಂದ ಕತ್ತು ಸೀಳಿದ ಸ್ಥಿತಿಯಲ್ಲಿ ಐವರ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿರಿ: ಮಾಜಿ ಸಚಿವರ ಸಿಡಿ ಪ್ರಕರಣ: 45ಕ್ಕೂ ಹೆಚ್ಚು ಪಿಜಿಗಳಲ್ಲಿ ಹುಡುಕಿದ್ರು ಸಿಗದ ಸಂತ್ರಸ್ತೆ ಸುಳಿವು
ಪೊಲೀಸರು ಮೃತರ ಮನೆಯಲ್ಲಿ ಕೊಲೆ ಬಳಸಿದ್ದಾರೆನ್ನಲಾದ ಚಾಕು ಮತ್ತು ಕೊಡಲಿ ಸೇರಿದಂತೆ ಹರಿತವಾದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಮೃತರೊಬ್ಬರ ಬಗ್ಗೆ ಮಾಹಿತಿ ನೀಡಿರುವ ರಹೀಮ್ ಯಾರ್ ಖಾನ್ ನಗರದ ಸಾಮಾಜಿಕ ಕಾರ್ಯಕರ್ತ ಬೀರ್ಬಲ್ ದಾಸ್, ಮೇಘ್ವಾಲ್ ಹಿಂದು ಆಗಿರುವ ರಾಮ್ ಛಾಂದ್ ವಯಸ್ಸು 35-36. ಛಾಂದ್ ಟ್ರೈಲರಿಂಗ್ ಶಾಪ್ ನಡೆಸುತ್ತಿದ್ದರು. ಇದೀಗ ಘಟನೆಯಿಂದ ಸ್ಥಳೀಯರಿಗೆ ಶಾಕ್ ಆಗಿದೆ. (ಏಜೆನ್ಸೀಸ್)
ಸಂಕಷ್ಟದಲ್ಲೂ ಮಿಡಿದ ಸರ್ಕಾರ: ಕೋವಿಡ್ ಸಂದರ್ಭ ನೊಂದವರಿಗೆ 2,272 ಕೋಟಿ ರೂ. ಪ್ಯಾಕೇಜ್
ಉಳುವವನೇ ಒಡೆಯ: ರೈತರಿಗೆ ಕುಮ್ಕಿ, ಬಾಣೆ, ಬೆಟ್ಟ, ಸೊಪ್ಪಿನ ಬೆಟ್ಟ ಭೂಮಿ
ಸಂಪಾದನೆ ಜತೆಗೆ ವ್ಯಕ್ತಿತ್ವ ವಿಕಸನವೂ ಬಹಳ ಮುಖ್ಯ; ಸ್ಫೂರ್ತಿಯಿಂದ ರಮೇಶ್….