ಭುವನೇಶ್ವರ್: ಬಾಯ್ಫ್ರೆಂಡ್ ಜತೆಗಿನ ಕಲಹದಿಂದ ಬೇಸತ್ತ ಯುವತಿಯೊಬ್ಬಳು ಜನನಿಬಿಡ ರಸ್ತೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಒಡಿಶಾ ರಾಜಧಾನಿ ಭರತಪುರ್ ರಸ್ತೆಯಲ್ಲಿ ಸೋಮವಾರ ನಡೆದಿದೆ.
ಯುವತಿಯ ಹೈಡ್ರಾಮದಿಂದ ಬಾಯ್ಫ್ರೆಂಡ್ ಮುಜುಗರ ಅನುಭವಿಸುವಂತಾಯಿತು. ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಜನನಿಬಿಡ ರಸ್ತೆಯ ಪಕ್ಕದಲ್ಲೇ ಈ ಪ್ರಸಂಗ ಜರುಗಿದೆ. ಇಬ್ಬರು ಸಹ ಸ್ಕೂಟರ್ನಲ್ಲಿ ಬಂದು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಬಳಿಕ ಯುವತಿ ಸ್ಕೂಟರ್ ಇಳಿದು ಹೋಗುವಾಗ ಆಕೆಯನ್ನು ತಡೆಯಲು ಬಾಯ್ಫ್ರೆಂಡ್, ಬ್ಯಾಗ್ ಹಿಡಿದು ಎಳೆದಿದ್ದಾನೆ.
ಇದನ್ನೂ ಓದಿರಿ: ಟೀಮ್ ಇಂಡಿಯಾ ಪರ ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಕನ್ನಡಿಗ ಪ್ರಸಿದ್ಧಕೃಷ್ಣ
ಹೀಗೆ ಇಬ್ಬರ ವಾಗ್ವಾದ ತಾರಕ್ಕೇರಿ ನಿಯಂತ್ರಣ ಕಳೆದುಕೊಂಡ ಯುವತಿ ತನ್ನ ಬ್ಯಾಗ್ನಲ್ಲಿ ಇಟ್ಟಿದ್ದ ಸ್ಯಾನಿಟೈಸರ್ ಕುಡಿದಿದ್ದಾಳೆ. ಯಾವಾಗ ಅದು ಪರಿಣಾಮ ಬೀರಲಿಲ್ಲ ಎಂದು ತಿಳಿಯಿತೋ ಆಕೆ ಎತ್ತರ ಪ್ರದೇಶದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಆದರೆ, ಮುಂದೆ ನಡೆಯುತ್ತಿದ್ದ ಅನಾಹುತದಿಂದ ಬಾಯ್ಫ್ರೆಂಡ್ ಮತ್ತು ಕೆಲ ಯುವಕರು, ಯುವತಿಯನ್ನು ಕಾಪಾಡಿದ್ದಾರೆ.
ಪ್ರಜ್ಞೆ ತಪ್ಪಿ ಬಿದ್ದಿದ್ದ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಬಾಯ್ಫ್ರೆಂಡ್ ಕರೆದೊಯ್ದಿದ್ದಾನೆ. ಅದೃಷ್ಟವಶಾತ್ ಯುವತಿಗೆ ಮತ್ತೆ ಪ್ರಜ್ಞೆ ಬಂದಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮತ್ತೊಂದು ಆಸ್ಪತ್ರೆಗೆ ಬಾಯ್ಫ್ರೆಂಡ್ ಕರೆದೊಯ್ದಿದ್ದಾನೆ. ಇಡೀ ಘಟನೆ ಸಾರ್ವಜನಿಕರ ಎದುರಲ್ಲೇ ನಡೆದಿದೆ. ಅನೇಕರು ಇಬ್ಬರ ಕಿತ್ತಾಟ ನೋಡಿ ಶಾಕ್ ಆಗಿದ್ದು ಉಂಟು. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಸಿನಿಮಾ ನಿರ್ಮಾಪಕ ಶಂಕರೇಗೌಡ ಬಂಧನ; ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪ್ರೊಡ್ಯೂಸರ್
ಖಾಸಗಿ ಶಾಲಾ ಶಿಕ್ಷಕರಿಗೂ ಶಿಕ್ಷಕರ ಕಲ್ಯಾಣ ನಿಧಿಗೆ ಸದಸ್ಯತ್ವ: ಸುರೇಶ್ ಕುಮಾರ್
ಆಮೆಗಳ ದಿಕ್ಕು ತಪ್ಪಿಸುವ ವಿದ್ಯುತ್ ದೀಪಗಳು! ಎಲ್ಲ ಆಮೆಗಳು ಒಂದೇ ದಿನ ಮೊಟ್ಟೆ ಇಡೋದಕ್ಕೆ ಕಾರಣವಿದು…!