ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ಇಂದು ನಿರಾಕರಿಸಿದೆ. ಇದರಿಂದಾಗಿ ಕವಿ ಮತ್ತು ಚಿತ್ರ ರಚನಾಕಾರ ಜಾವೆದ್ ಅಖ್ತರ್ ದೂರಿನ ಮೇಲೆ ಮುಂಬೈ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸುತ್ತಿರುವ ಕ್ರಿಮಿನಲ್ ಮೊಕದ್ದಮೆಯಲ್ಲಿ ಕಂಗನಾ ವಿಚಾರಣೆಗೆ ಹಾಜರಾಗಬೇಕಾಗಲಿದೆ.
ಟಿ.ವಿ. ಸಂದರ್ಶನವೊಂದರಲ್ಲಿ ಕಂಗನಾ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದರು ಎಂದು ಮಾಜಿ ಸಂಸದರೂ ಆಗಿರುವ ಜಾವೆದ್ ಅಖ್ತರ್ ದೂರು ನೀಡಿದ್ದರು. ಆ ದೂರಿನ ಮೇಲೆ ಮ್ಯಾಜಿಸ್ಟ್ರೇಟರು ಪ್ರಕರಣ ದಾಖಲಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದರು. ಈ ನಿಟ್ಟಿನಲ್ಲಿ ವಿಚಾರಣೆಗಾಗಿ ಕಳೆದ ಸೆಪ್ಟೆಂಬರ್ 1ನೇ ತಾರೀಖು ಕೋರ್ಟಿಗೆ ಕಂಗನಾ ಖುದ್ದು ಹಾಜರಾಗಬೇಕೆಂದು ಮ್ಯಾಜಿಸ್ಟ್ರೇಟರು ಆದೇಶಿಸಿದ್ದರು.
ಇದನ್ನೂ ಓದಿ: ರೌಡಿ ಪೆರೇಡ್: ಹಬ್ಬದ ವೇಳೆ ಕೆಟ್ಟ ಕೆಲಸಕ್ಕೆ ಕೈಹಾಕದಂತೆ ವಾರ್ನಿಂಗ್!
ಹೈಕೋರ್ಟ್ನಲ್ಲಿ ಕಂಗನಾ ಈ ಪ್ರಕರಣದ ದಾಖಲಿಸಿಕೊಂಡ ಮ್ಯಾಜಿಸ್ಟ್ರೇಟರ ಆದೇಶವನ್ನು ಪ್ರಶ್ನಿಸಿದ್ದರಿಂದ ವಿಚಾರಣೆಯನ್ನು ಮುಂದೂಡಲಾಗಿತ್ತು. ಇಂದು ಹೈಕೋರ್ಟ್ ಕಂಗನಾರಿಗೆ ಈ ವಿಚಾರವಾಗಿ ಯಾವುದೇ ರಿಲೀಫ್ ನೀಡಲು ನಿರಾಕರಿಸಿರುವುದರಿಂದ, ಅವರು ಸೆಪ್ಟೆಂಬರ್ 14 ರ ಮಂಗಳವಾರ ನಿಗದಿಯಾಗಿರುವ ವಿಚಾರಣೆಗೆ ಮ್ಯಾಜಿಸ್ಟ್ರೇಟ್ ಕೋರ್ಟ್ನ ಮುಂದೆ ಹಾಜರಾಗಬೇಕಿದೆ. (ಏಜೆನ್ಸೀಸ್)
VIDEO| 5 ಭಾಷೆಗಳಲ್ಲಿ 777 ಚಾರ್ಲಿಯ ‘ಟಾರ್ಚರ್ ಸಾಂಗ್’ ರಿಲೀಸ್! ಚಿತ್ರದ ಬಿಡುಗಡೆಗೂ ದಿನಾಂಕ ನಿಗದಿ
ಹು-ಧಾ ಪಾಲಿಕೆ: ಬಿಜೆಪಿಗೆ ಹೊಸತೊಂದು ವಿಘ್ನ – ಪಕ್ಷದಲ್ಲಿ ಉಪಮೇಯರ್ ಅಭ್ಯರ್ಥಿಯೇ ಇಲ್ಲ!