ಮುಂಬೈ: ಕ್ಯಾನ್ನಲ್ಲಿ ಇಂಧನ ನೀಡಲು ನಿರಾಕರಿಸಿದ ಪೆಟ್ರೋಲ್ ಪಂಪ್ ನ ಕ್ಯಾಬಿನ್ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡ ಒಬ್ಬಾತ ಅಲ್ಲಿ ಜೀವಂತ ಹಾವನ್ನು ಎಸೆದು ಪರಾರಿಯಾಗಿದ್ದಾನೆ.
ಮುಂಬೈನ ಮಲ್ಕಾಪುರ ರಸ್ತೆಯ ಚೌಧರಿ ಪೆಟ್ರೋಲ್ ನಿಲ್ದಾಣದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಆತ ಹಾವು ಹಿಡಿಯುವವನೆಂದು ಶಂಕೆ ವ್ಯಕ್ತವಾಗಿದ್ದು, ಈ ಘಟನೆಯನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ವೀಡಿಯೊದಲ್ಲಿ, ಆ ವ್ಯಕ್ತಿ ಹಾವನ್ನು ಜಾರ್ನಿಂದ ಕ್ಯಾಬಿನ್ನಲ್ಲಿ ಹರಿಬಿಡುತ್ತಿರುವ ದೃಶ್ಯಾವಳಿ ಇದೆ. ಹಾವು ಕ್ಯಾಬಿನ್ನ ಒಂದು ಬದಿಗೆ ತೆವಳಿದಾಗ ಆ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.
कैसे-कैसे लोग होते हैं!! बुलढाणा: बोतल में पेट्रोल देने से मना किया तो नाराज युवक ने पेट्रोल पंप दफ़्तर में सांप छोड़ दिया @ndtvindia pic.twitter.com/BFWbMoxVZC
— sunilkumar singh (@sunilcredible) July 14, 2020
ಇದನ್ನೂ ಓದಿ: ಕೋವಿಡ್ ಸೋಂಕಿತ ಪವಾಡ ಪುರುಷ ಹಾಲಸ್ವಾಮೀಜಿ ನಿಧನ
ನಂತರ ಮತ್ತೊಬ್ಬ ಹಾವು ಹಿಡಿಯುವವನನ್ನು ಕರೆಸಿ ಹಾವನ್ನು ಸೆರೆಹಿಡಿಯಲಾಯಿತು. ಪೊಲೀಸರು ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ.
ಕ್ಯಾನ್ ಅಥವಾ ಡ್ರಮ್ನಲ್ಲಿ ಇಂಧನವನ್ನು ನೀಡದಂತೆ ಅಧಿಕಾರಿಗಳ ಸೂಚನೆ ಇರುವುದರಿಂದ ಪಂಪ್ ಸಿಬ್ಬಂದಿ ಆ ವ್ಯಕ್ತಿಗೆ ಇಂಧನ ನೀಡಲು ನಿರಾಕರಿಸಿದ್ದರು.
ಪುರುಚ್ಚಿ ತಲೈವಿ ಜಯಲಲಿತಾ ಮನೆ ಸ್ಮಾರಕವಾಗಲ್ಲ; ಹಾಗಿದ್ದರೆ ಬಳಕೆಯಾಗೋದಾದರೂ ಯಾವುದಕ್ಕೆ?