More

    ಕ್ಯಾನ್​​ನಲ್ಲಿ ಇಂಧನ ನೀಡಲು ನಿರಾಕರಿಸಿದ್ದಕ್ಕೆ ಆತ ಏನು ಮಾಡಿದ? ಕೇಳಿದರೆ ನಿಮಗೂ ಶಾಕ್ ಆಗುತ್ತೆ…

    ಮುಂಬೈ: ಕ್ಯಾನ್​​ನಲ್ಲಿ ಇಂಧನ ನೀಡಲು ನಿರಾಕರಿಸಿದ ಪೆಟ್ರೋಲ್ ಪಂಪ್ ನ ಕ್ಯಾಬಿನ್ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡ ಒಬ್ಬಾತ ಅಲ್ಲಿ ಜೀವಂತ ಹಾವನ್ನು ಎಸೆದು ಪರಾರಿಯಾಗಿದ್ದಾನೆ.
    ಮುಂಬೈನ ಮಲ್ಕಾಪುರ ರಸ್ತೆಯ ಚೌಧರಿ ಪೆಟ್ರೋಲ್ ನಿಲ್ದಾಣದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಆತ ಹಾವು ಹಿಡಿಯುವವನೆಂದು ಶಂಕೆ ವ್ಯಕ್ತವಾಗಿದ್ದು, ಈ ಘಟನೆಯನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
    ವೀಡಿಯೊದಲ್ಲಿ, ಆ ವ್ಯಕ್ತಿ ಹಾವನ್ನು ಜಾರ್​​ನಿಂದ ಕ್ಯಾಬಿನ್​​ನಲ್ಲಿ ಹರಿಬಿಡುತ್ತಿರುವ ದೃಶ್ಯಾವಳಿ ಇದೆ. ಹಾವು ಕ್ಯಾಬಿನ್‌ನ ಒಂದು ಬದಿಗೆ ತೆವಳಿದಾಗ ಆ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಇದನ್ನೂ ಓದಿ: ಕೋವಿಡ್​ ಸೋಂಕಿತ ಪವಾಡ ಪುರುಷ ಹಾಲಸ್ವಾಮೀಜಿ ನಿಧನ

    ನಂತರ ಮತ್ತೊಬ್ಬ ಹಾವು ಹಿಡಿಯುವವನನ್ನು ಕರೆಸಿ ಹಾವನ್ನು ಸೆರೆಹಿಡಿಯಲಾಯಿತು. ಪೊಲೀಸರು ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ.
    ಕ್ಯಾನ್ ಅಥವಾ ಡ್ರಮ್‌ನಲ್ಲಿ ಇಂಧನವನ್ನು ನೀಡದಂತೆ ಅಧಿಕಾರಿಗಳ ಸೂಚನೆ ಇರುವುದರಿಂದ ಪಂಪ್ ಸಿಬ್ಬಂದಿ ಆ ವ್ಯಕ್ತಿಗೆ ಇಂಧನ ನೀಡಲು ನಿರಾಕರಿಸಿದ್ದರು.

    ಪುರುಚ್ಚಿ ತಲೈವಿ ಜಯಲಲಿತಾ ಮನೆ ಸ್ಮಾರಕವಾಗಲ್ಲ; ಹಾಗಿದ್ದರೆ ಬಳಕೆಯಾಗೋದಾದರೂ ಯಾವುದಕ್ಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts