More

    ಕಾಂಗ್ರೆಸ್ ಗ್ಯಾರಂಟಿ ಮೂಲಕ ಜನರಿಗೆ ಗೌರವ

    ಹಾವೇರಿ: ಯುವಕರಿಗೆ ಉದ್ಯೋಗ ಸೃಷ್ಟಿಸದ, ರೈತರ ಆದಾಯ ದುಪ್ಪಟ್ಟುಗೊಳಿಸದ, ನೋಟ್‌ಬ್ಯಾನ್ ಸಂಕಷ್ಟದಲ್ಲಿ ಸ್ಪಂದಿಸದ ಬಿಜೆಪಿಯನ್ನು ಮತದಾರರು ಇನ್ನೂ ಮರೆತಿಲ್ಲ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಭಾವನೆಗಳನ್ನು ಗೌರವಿಸಿದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ ನೀಡಿ ಬೆಂಬಲಿಸಿ ಎಂದು ಶಾಸಕ ರುದ್ರಪ್ಪ ಲಮಾಣಿ ಮನವಿ ಮಾಡಿದರು.
    ನಗರದ ಶಿವಬಸವನಗರ, ಕಾಗಿನೆಲೆ ರಸ್ತೆ, ಕಟ್ಟಡ ಕಾರ್ಮಿಕರ ಭವನ ಹಾಗೂ ವಿವಿಧ ಸ್ಥಳಗಳಲ್ಲಿ ಶನಿವಾರ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರವಾಗಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಗಡ್ಡದೇವರಮಠ ಕೃಷಿ ಕುಟುಂಬದಿಂದ ಬಂದಿದ್ದು, ಜನಸಾಮಾನ್ಯರ ಸಂಕಷ್ಟಗಳನ್ನು ಅರಿತಿದ್ದಾರೆ. ಈ ಬಾರಿ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಕೋರಿದರು.
    ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಅಧಿಕಾರಕ್ಕಿಂತ ಅವಿನಾಭಾವ ಸಂಬಂಧ ಮುಖ್ಯ. ತಮ್ಮ ಜತೆಗಿದ್ದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಗತ್ಯವಿರುವ ಮೂಲಸೌಲಭ್ಯಗಳಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.
    ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಪಾಟೀಲ, ನಗರಸಭೆ ಸದಸ್ಯರಾದ, ಸಂಜೀವಕುಮಾರ ನೀರಲಗಿ, ಗಣೇಶ ಬಿಷ್ಟಣ್ಣವರ, ಸಚಿನ ಡಂಬಳ, ಉಮೇಶ ಕುರುಬರ, ಅತಾವುಲ್ಲಾ ಖಾಜಿ, ಲಾಲ್ ಚೋಪದಾರ, ವಿಶಾಲಾಕ್ಷಿ ಆನವಟ್ಟಿ, ಪ್ರಭುಗೌಡ ಬಿಷ್ಟನಗೌಡ್ರ, ಪ್ರಸನ್ನ ಹಿರೇಮಠ, ದಾಸಪ್ಪ ಕರ್ಜಗಿ, ಬಾಬು ಮೋಮಿನಗಾರ, ಬಸವರಾಜ ಹೆಡಿಗೊಂಡ, ಉಮೀದ್ ನದಾಫ್, ಜಯಶ್ರೀ ಶಿವಪುರ, ಶಾಂತಾ ಶಿರೂರ, ಲಲಿತಾ ಹುಗ್ಗಿ, ನಾಗರಾಜ ತಳವಾರ, ಬಸವರಾಜ ಮಾಳಗಿ, ದಾವಲಸಾಬ ಹಿರೇಮುಗದೂರ, ಅಪ್ಪಾಲಾಲ ಯಾದವಾಡ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts