ಪ್ರಯಾಗರಾಜ್: ಚೀನಾದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡು ಜಾಗತಿಕವಾಗಿ ಭಾರಿ ಭೀತಿ ಸೃಷ್ಟಿಸಿ, ಇದೀಗ ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್ ಮಹಾಮಾರಿ ದೇಶಾದ್ಯಂತ ಹರಡದಿರುವಂತೆ ತಡೆಗಟ್ಟಲು ಅಧಿಕಾರಿಗಳೊಂದಿಗೆ ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ.
ಇದರ ನಡುವೆಯೇ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿರುವ ತೀರ್ಥ ಪುರೋಹಿತ್ ಸಮುದಾಯವು ವೈರಸ್ ಸೋಂಕು ಹರಡಿದಿರಲೆಂದು ಗುರುವಾರ ಹೋಮ ಹವನ ನೆರವೇರಿಸಿ, ಸುದ್ದಿಯಾಗಿದೆ.
ಭಾರತದಲ್ಲಿ ವೈರಸ್ ಸ್ಫೋಟಗೊಳ್ಳದಂತೆ ತೀರ್ಥ ಪುರೋಹಿತ ಸಮಾಜವು ಹವನ ನೆರವೇರಿಸಿದೆ. ನಾನು ಚೀನಾದ ವಸ್ತುಗಳನ್ನು ಬಹಿಷ್ಕರಿಸುತ್ತೇನೆ. ಹಾಗೆಯೇ ಎಲ್ಲ ಭಾರತೀಯರೂ ಚೀನಾ ವಸ್ತುಗಳನ್ನು ವಿರೋಧಸಲು ಮನವಿ ಮಾಡಿಕೊಳ್ಳುತ್ತೇನೆಂದು ಸತ್ಯೇಂದರ್ ತಿವಾರಿ ಎಂಬುವರು ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ತೀರ್ಥ ಪುರೋಹಿತ ಸಮಾಜದ ಯುವಕರು ಕೂಡ ಹವನವನ್ನು ನಡೆಸುತ್ತಿದ್ದಾರೆ. ಹವನ ಮಾಡುವುದರಿಂದ ಇಡೀ ಜಗತ್ತು ಕೂಡ ಶುಚಿಗೊಳ್ಳುತ್ತದೆ. ಆಮೇಲೆ ಯಾವುದೇ ವೈರಸ್ನಿಂದ ತೊಂದರೆಯಾಗುವುದಿಲ್ಲ ಎಂಬುದನ್ನು ವಿಜ್ಞಾನಿಗಳು ಕೂಡ ನಂಬಿದ್ದಾರೆ ಎಂದು ಅಂಕುಶ್ ಶರ್ಮಾ ಎಂಬುವರು ಅಭಿಪ್ರಾಯಪಟ್ಟರು.
ಸದ್ಯ ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟಿದ್ದು, 30ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. (ಏಜೆನ್ಸೀಸ್)