More

    ಮಹಾಮಾರಿ ಕೊರೊನಾ ವೈರಸ್​ ಹರಡದಿರಲೆಂದು ಪ್ರಯಾಗರಾಜ್​ನಲ್ಲಿ ಹೋಮ ಹವನ!

    ಪ್ರಯಾಗ​ರಾಜ್: ಚೀನಾದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡು ಜಾಗತಿಕವಾಗಿ ಭಾರಿ ಭೀತಿ ಸೃಷ್ಟಿಸಿ, ಇದೀಗ ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್​ ಮಹಾಮಾರಿ ದೇಶಾದ್ಯಂತ ಹರಡದಿರುವಂತೆ ತಡೆಗಟ್ಟಲು ಅಧಿಕಾರಿಗಳೊಂದಿಗೆ ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ.

    ಇದರ ನಡುವೆಯೇ ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿರುವ ತೀರ್ಥ ಪುರೋಹಿತ್​ ಸಮುದಾಯವು ವೈರಸ್​ ಸೋಂಕು ಹರಡಿದಿರಲೆಂದು ಗುರುವಾರ ಹೋಮ ಹವನ ನೆರವೇರಿಸಿ, ಸುದ್ದಿಯಾಗಿದೆ.

    ಭಾರತದಲ್ಲಿ ವೈರಸ್​ ಸ್ಫೋಟಗೊಳ್ಳದಂತೆ ತೀರ್ಥ ಪುರೋಹಿತ ಸಮಾಜವು ಹವನ ನೆರವೇರಿಸಿದೆ. ನಾನು ಚೀನಾದ ವಸ್ತುಗಳನ್ನು ಬಹಿಷ್ಕರಿಸುತ್ತೇನೆ. ಹಾಗೆಯೇ ಎಲ್ಲ ಭಾರತೀಯರೂ ಚೀನಾ ವಸ್ತುಗಳನ್ನು ವಿರೋಧಸಲು ಮನವಿ ಮಾಡಿಕೊಳ್ಳುತ್ತೇನೆಂದು ಸತ್ಯೇಂದರ್​ ತಿವಾರಿ ಎಂಬುವರು ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.

    ತೀರ್ಥ ಪುರೋಹಿತ ಸಮಾಜದ ಯುವಕರು ಕೂಡ ಹವನವನ್ನು ನಡೆಸುತ್ತಿದ್ದಾರೆ. ಹವನ ಮಾಡುವುದರಿಂದ ಇಡೀ ಜಗತ್ತು ಕೂಡ ಶುಚಿಗೊಳ್ಳುತ್ತದೆ. ಆಮೇಲೆ ಯಾವುದೇ ವೈರಸ್​ನಿಂದ ತೊಂದರೆಯಾಗುವುದಿಲ್ಲ ಎಂಬುದನ್ನು ವಿಜ್ಞಾನಿಗಳು ಕೂಡ ನಂಬಿದ್ದಾರೆ ಎಂದು ಅಂಕುಶ್​ ಶರ್ಮಾ ಎಂಬುವರು ಅಭಿಪ್ರಾಯಪಟ್ಟರು.

    ಸದ್ಯ ಕೊರೊನಾ ವೈರಸ್​ ಭಾರತಕ್ಕೆ ಕಾಲಿಟ್ಟಿದ್ದು, 30ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts