More

    ಮದುವೆಯಾಗಿ ಮೂರೇ ತಿಂಗಳಲ್ಲಿ ಹೆಂಡತಿಯನ್ನು ಕೊಂದು, ತಾನೂ ಸತ್ತ! ಪ್ರಕರಣದಲ್ಲಿ ಕೇಳಿಬಂತು ಗಂಡ ಬಿಟ್ಟ ಸಹೋದರಿಯ ಹೆಸರು…

    ಹಾಸನ: ಗಂಡನಿಂದ ಪರಿತ್ಯಕ್ತಳಾಗಿ ತವರು ಸೇರಿದ್ದ ತನ್ನ ಸಹೋದರಿಯನ್ನು ಮನೆಯಿಂದ ಹೊರ ಹಾಕುವಂತೆ ಕಿರುಕುಳ ನೀಡುತ್ತಿದ್ದ ಪತ್ನಿಯನ್ನು ಕೊಲೆಗೈದು ಪತಿಯು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ತಾಲೂಕಿನ ಶಾಂತಿಗ್ರಾಮ ನಿವಾಸಿ ತುಳಸಿದಾಸ್ (35) ಪತ್ನಿ ಅನ್ನಪೂರ್ಣ (27) ಮೃತರು. ಗ್ರಾಮದ ಎಟಿಎಂನಲ್ಲಿ ಸೆಕ್ಯುರೆಟಿಯಾಗಿ ಕೆಲಸ ಮಾಡಿಕೊಂಡಿದ್ದ ತುಳಸಿದಾಸ್ ಮೂರು ತಿಂಗಳ ಹಿಂದಷ್ಟೇ ಮೈಸೂರು ಮೂಲದ ಅನ್ನಪೂರ್ಣ ಅವರನ್ನು ಮದುವೆಯಾಗಿದ್ದ.

    ಗಂಡನಿಂದ ಪರಿತ್ಯಕ್ತಳಾದ ಸಹೋದರಿಯನ್ನು ಮನೆಯಿಂದ ಕಳುಹಿಸಬೇಕೆಂದು ಅನ್ನಪೂರ್ಣ ನಿತ್ಯ ಜಗಳ ಮಾಡುತ್ತಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ನೊಂದಿದ್ದ ತುಳಸಿದಾಸ್ ಪತ್ನಿಯನ್ನು ಕೊಲೆ ಮಾಡುವ ಜತೆಗೆ ತಾನೂ ನೇಣಿಗೆ ಶರಣಾಗಿದ್ದಾನೆ.

    ಗುರುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ದಂಪತಿಗಳಿಬ್ಬರೂ ಎಳನೀರು ಕುಡಿದು ಜಮೀನು ಕಡೆಗೆ ತೆರಳಿದ್ದಾರೆ. ಶಾಂತಿಗ್ರಾಮದಿಂದ ಮೂರು ಕಿ.ಮೀ. ದೂರದ ಹೊಂಗೆರೆ ರಸ್ತೆಯಲ್ಲಿರುವ ಜಮೀನಿಗೆ ಪತ್ನಿಯನ್ನು ಕೊರೆದೊಯ್ದ ತುಳಸಿದಾಸ್ ಕೈಯಲ್ಲಿದ್ದ ಚಾಕುವಿನಿಂದ ಚುಚ್ಚು ಕೊಲೆ ಮಾಡಿದ್ದಾನೆ. ನಂತರ ಸಮೀಪದ ಮರಕ್ಕೆ ತಾನು ನೇಣು ಹಾಕಿಕೊಂಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ಪಿಎಸ್‌ಐ ಕಾವ್ಯಶ್ರೀ ಪರಿಶೀಲನೆ ನಡೆಸಿದರು. ಶಾಂತಿಗ್ರಾಮ ಠಾಣೆಯಲ್ಲಿ ದೂರು ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts