More

    ರಸ್ತೆಯಲ್ಲೇ ಆನೆಗಳ ಸಂಚಾರ

    ಸಕಲೇಶಪುರ: ತಾಲೂಕಿನಲ್ಲಿ ಕಾಡಾನೆಗಳ ಕಾಟ ಮತ್ತಷ್ಟು ಹೆಚ್ಚಿದ್ದು ಹಾಡಹಗಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಆತಂಕವನ್ನು ಇಮ್ಮಡಿಗೊಳಿಸಿವೆ.
    ಬುಧವಾರ ಹಾಲೇಬೇಲೂರು-ಹೊಂಕರವಳ್ಳಿ ಮುಖ್ಯರಸ್ತೆಯಲ್ಲಿ ಮುಂಜಾನೆ 10 ಗಂಟೆ ವೇಳೆ ಮರಿಯೊಂದಿಗೆ ಮೂರು ಕಾಡಾನೆಗಳು ರಸ್ತೆಯಲ್ಲಿ 1 ಕಿ.ಮೀ.ದೂರ ಸಂಚರಿಸುವ ಮೂಲಕ ಈ ಭಾಗದ ಜನರಲ್ಲಿ ಇನ್ನಿಲ್ಲದ ಆತಂಕ ಹುಟ್ಟು ಹಾಕಿದ್ದರೆ, ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಕಾಡಾನೆ ಭಯದಿಂದ ಮನೆಗೆ ವಾಪಸ್ ಬಂದಿದ್ದಾರೆ.
    ಅಲ್ಲದೆ ಹಲಸುಲಿಗೆ ಗ್ರಾಮದ ಸುಭಾಷ್ ಅವರ ಕಾಫಿ ತೋಟದಲ್ಲಿ 17 ಕಾಡಾನೆಗಳು ಬೀಡುಬಿಟ್ಟಿವೆ. ತಾಲೂಕಿನಲ್ಲಿ ತುಂತುರು ಮಳೆ ಬೀಳುತ್ತಿದ್ದು, ಈ ಸಂದರ್ಭ ಬೃಹತ್ ಕಾಡಾನೆ ಹಿಂಡು ಕಾಫಿ ತೋಟ ಪ್ರವೇಶಿಸಿದರೆ ಉಂಟಾಗುವ ನಷ್ಟ ಊಹೆಗೂ ನಿಲುಕದ್ದು ಎಂಬುದು ಕಾಫಿ ಬೆಳೆಗಾರರ ಆತಂಕವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts