ಮಂಡ್ಯ: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೋರಾಟ ನಡೆಯಬೇಕು ಎಂಬುದಾಗಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಕರೆ ನೀಡಿದ್ದಾರೆ. ಭುವನಂ ಫೌಂಡೇಷನ್ ಪರವಾಗಿ ಇಂದು ಮಂಡ್ಯಗೆ ಭೇಟಿ ನೀಡಿದ ಇವರಿಬ್ಬರು ಈ ಕರೆ ನೀಡಿದ್ದಾರೆ.
ಇತ್ತೀಚೆಗೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾದ ಬಾಲಕಿಯ ಮನೆಗೆ ಭೇಟಿ ನೀಡಿ, ಕುಟುಂಬಸ್ಥರನ್ನು ಭೇಟಿಯಾದ ಹರ್ಷಿಕಾ-ಭುವನ್, ತಮ್ಮ ಭುವನಂ ಫೌಂಡೇಷನ್ ವತಿಯಿಂದ ಸಾಂತ್ವನ ಹೇಳಿದರು. ಆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಹೋರಾಟಕ್ಕೆ ಕರೆ ನೀಡಿದರು.
ಅತ್ಯಾಚಾರಕ್ಕೆ ಒಳಗಾಗಿ ಬಲಿಯಾದ ಬಾಲಕಿಯ ಕುಟುಂಬದವರಿಗೆ ಸಾಂತ್ವನ ಹೇಳಲು ಇಂದು ಬೆಳಗ್ಗೆ ಮಳವಳ್ಳಿಯಲ್ಲಿರುವ ಅವರ ಮನೆಗೆ ಹೋಗಿದ್ದೆವು. ಅಲ್ಲಿ ತಂದೆ-ತಾಯಿಯ ಆಕ್ರಂದನ ಕರಳು ಕಿವುಚುವ ಹಾಗಿತ್ತು. ನಾವು ಕರ್ನಾಟಕ ಸರ್ಕಾರದಲ್ಲಿ ಮಾಡುವ ಮನವಿ ಇಷ್ಟೆ, ಈ ಕೃತ್ಯ ಎಸಗಿದ ಆ ಕ್ರೂರಿಗೆ ತಕ್ಕ ಕಠಿಣ ಶಿಕ್ಷೆ ಕೊಡುವುದರ ಜೊತೆ ಈ ತರಹದ ಕೃತ್ಯಗಳು ಇನ್ನು ಮುಂದೆ ಎಂದೂ ನಡೆಯದಿರದ ರೀತಿಯಲ್ಲಿ ಕಾನೂನು ಜಾರಿ ಗೊಳಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂಬುದಾಗಿ ಈ ಕಲಾವಿದ ಜೋಡಿ ತಿಳಿಸಿದರು.
ಕರ್ನಾಟಕದಲ್ಲಿ ಈ ತರಹದ ಕ್ರೂರ ಘಟನೆಗಳು ಇನ್ನೆಂದಿಗೂ ನಡೆಯದ ಹಾಗೆ ಮತ್ತು ಇಂಥ ಕ್ರೂರಿಗಳಲ್ಲಿ ಭಯ ಹುಟ್ಟಿಸುವ ಹಾಗೆ ಕಾನೂನು ಜಾರಿ ಮಾಡಬೇಕು. ಹೆಣ್ಣುಮಕ್ಕಳು ಸುರಕ್ಷಿತವಾಗಿ ಇರುವವರೆಗೂ ಈ ಕುರಿತು ಜಿಲ್ಲೆ ಜಿಲ್ಲೆಯಲ್ಲೂ ಹೋರಾಟ ನಡೆಯಲಿ ಎಂದು ಕರೆ ನೀಡಿದರು.
‘ಕಾಂತಾರ’ ಭರ್ಜರಿ ಯಶಸ್ಸು; ಕುತೂಹಲ ಕೆರಳಿಸಿದೆ ಇವರಿಬ್ಬರ ಮೌನ!