More

    ಅಗರಿ ಪ್ರಶಸ್ತಿಗೆ ಧರ್ಮಸ್ಥಳ ಹರ್ಷೇಂದ್ರಕುಮಾರ್ ಆಯ್ಕೆ

    ಮಂಗಳೂರು: ಸುರತ್ಕಲ್‌ನ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆ ಪ್ರತಿವರ್ಷ ನೀಡುವ ಪ್ರತಿಷ್ಠಿತ ಅಗರಿ ಪ್ರಶಸ್ತಿಗೆ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.


    ಐತಿಹಾಸಿಕ ದಾಖಲೆ ಹೊಂದಿರುವ ಶ್ರೀ ಧರ್ಮಸ್ಥಳ ಮೇಳದ ಯಶಸ್ವಿ ಸಂಚಾಲಕರಾಗಿ ನಾಲ್ಕು ದಶಕಗಳಿಗೂ ಮಿಕ್ಕಿದ ಅನುಭವವಿರುವ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮತ್ತು ಬ್ಯಾಂಕಿಂಗ್ ಮೊದಲಾದ ಆಡಳಿತಾತ್ಮಕ ಕ್ಷೇತ್ರದ ಅನುಭವ ಪರಿಗಣಿಸಿ ಡಿ.ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಅಗರಿ ಶ್ರೀನಿವಾಸ ಭಾಗವತರು ಧರ್ಮಸ್ಥಳ ಮೇಳದಲ್ಲಿ ದೀರ್ಘಕಾಲ ಭಾಗವತರಾಗಿದ್ದರು ಎಂದು ವೇದಿಕೆಯ ಕಾರ್ಯಾಧ್ಯಕ್ಷ ಅಗರಿ ರಾಘವೇಂದ್ರ ರಾವ್ ತಿಳಿಸಿದ್ದಾರೆ.


    ಅಗರಿ ಶೈಲಿಯನ್ನು ರಂಗದಲ್ಲಿ ಬಳಸಿ, ಅದರ ಉಳಿವು ಮತ್ತು ಬೆಳೆಯುವಿಕೆಯಲ್ಲಿ ತೊಡಗಿರುವ ಭಾಗವತ ಗಿರೀಶ್ ರೈ ಕಕ್ಯಪದವು ಅವರಿಗೆ ಅಗರಿ ಶೈಲಿ ಪ್ರಶಸ್ತಿ ಮತ್ತು ಅಗರಿ ಶ್ರೀನಿವಾಸ ಭಾಗವತರ ಶ್ರೀ ದೇವಿಮಹಾತ್ಮ್ಯೆ ಪ್ರಸಂಗದ ವಿಶೇಷ ಅಧ್ಯಯನ ನಡೆಸಿ ಪ್ರಬಂಧ ಮಂಡಿಸಿರುವ ವಾದಿರಾಜ ಕಲ್ಲೂರಾಯರಿಗೆ ಅಗರಿ ವಿಶೇಷ ಸನ್ಮಾನ ಈ ಸಂದರ್ಭ ನಡೆಸಲಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts