More

    ಕೃಷಿ ಅಭಿವೃದ್ಧಿಗಾಗಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ಸಿಗುವುದಾಗಿ ಹೇಳಿದ ಶಾಸಕ ಜಿ.ಕರುಣಾಕರರೆಡ್ಡಿ

    ಹರಪನಹಳ್ಳಿ: ಗಂಗಾಕಲ್ಯಾಣ ಯೋಜನೆಯಡಿ ಆದಿಜಾಂಬವ ನಿಗಮದಿಂದ 23 ಮತ್ತು ಅಂಬೇಡ್ಕರ ನಿಗಮದಿಂದ ನಾಲ್ವರಿಗೆ 3.5 ಲಕ್ಷ ರೂ. ಸಹಾಯಧನದಲ್ಲಿ 2018-19ನೇ ಸಾಲಿನ ಕೊಳವೆಬಾವಿ ಸಾಮಗ್ರಿಗಳನ್ನು ನೀಡಲಾಗಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು. ಪಟ್ಟಣದ ಬಾಬು ಜಗಜೀವನ್‌ರಾಮ್ ಭವನದ ಆವರಣದಲ್ಲಿ ಶನಿವಾರ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಒಂದು ವೇಳೆ ಅಳದಲ್ಲಿ ನೀರು ದೊರೆತು ಹೆಚ್ಚಿನ ಹಣ ಖರ್ಚು ಆದಲ್ಲಿ ಫಲಾನುಭವಿಗಳಿಗೆ ನಿಗಮದಿಂದ ಸಾಲವನ್ನು ಸಹಾಯಧನ ಅಡಿ ನೀಡಲಾಗುವುದು ಎಂದರು. ಬಿಜೆಪಿ ಮುಖಂಡರಾದ ಕಣಿವಿಹಳ್ಳಿ ಮಂಜುನಾಥ, ಆರ್.ಲೋಕೇಶ್, ಎಂ.ಮಲ್ಲೇಶ್, ನಾಗರಾಜ, ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts