More

    ಕಾಂಪೌಂಡ್ ಕಾಮಗಾರಿಗೆ ಭೂಮಿಪೂಜೆ

    ಹರಿಹರ: ಇಲ್ಲಿನ ಜೈಭೀಮ್ ನಗರದಲ್ಲಿನ ಈದ್ಗಾ ಮೈದಾನದ ಕಾಂಪೌಂಡ್ ಕಾಮಗಾರಿಗೆ ಶಾಸಕ ಎಸ್.ರಾಮಪ್ಪ ಭಾನುವಾರ ಭೂಮಿಪೂಜೆ ನೆರವೇರಿಸಿದರು.

    ಈ ವೇಳೆ ಮಾತನಾಡಿ, ಕೋವಿಡ್ ಹೆಸರಿನಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಭ್ರಷ್ಟಾಚಾರ ಮಾಡುವಲ್ಲಿ ನಿರತವಾಗಿವೆ ಎಂದು ಆರೋಪಿಸಿದರು.

    ಕೋವಿಡ್ ಪಾಸಿಟಿವ್ ಪ್ರಕರಣಗಳ ಕುರಿತು ಸುಳ್ಳು ಸುದ್ದಿ ಹಬ್ಬಿಸಿ, ಹಣ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಆಸ್ಪತ್ರೆಗಳಿಗೆ ಯಾವುದೇ ವ್ಯಕ್ತಿ ಚಿಕಿತ್ಸೆಗೆಂದು ತೆರಳಿದರೆ ಕರೊನಾ ಪಾಸಿಟಿವ್ ಇದೆ ಎಂದು ಹೇಳಿ, ಲಕ್ಷಾಂತರ ರೂಪಾಯಿ ಬಿಲ್ ಮಾಡಲಾಗುತ್ತಿದೆ ಎಂದು ದೂರಿದರು.

    ಹರಿಹರ ಕ್ಷೇತ್ರಕ್ಕೆ ನಾನು ಎಷ್ಟೇ ಅನುದಾನ ತಂದು ಕಾಮಗಾರಿ ಮಾಡಿದ್ದರೂ ಅದು ಕಡಿಮೆ ಎನಿಸುತ್ತಿದೆ. ಕ್ಷೇತ್ರಕ್ಕೆ ಬರುವ ಅನುದಾನವನ್ನು ಬಿಜೆಪಿ ಸರ್ಕಾರ ತಡೆಹಿಡಿದಿದೆ ಎಂದರು.

    ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಜಬ್ಬಾರ್ ಮಾತನಾಡಿ, ಅಧಿಕಾರ ಇದ್ದಾಗ ಅಭಿವೃದ್ಧಿ ಕೆಲಸ ಮಾಡಿದರೆ ಅವು ಮುಂದೆ ನಮ್ಮ ಹೆಸರನ್ನು ಜೀವಂತವಾಗಿರಿಸುತ್ತವೆ ಎಂದರು.

    ನಗರಸಭೆ ಸದಸ್ಯರಾದ ಎಂ.ಎಸ್.ಬಾಬುಲಾಲ್, ಅಬ್ದುಲ್‌ಅಲಿಂ, ಕೆ.ಜಿ.ಸಿದ್ದೇಶ್, ಇಬ್ರಾಹಿಂ ಕುರೇಶಿ, ಮುಖಂಡರಾದ ಜಾಕೀರ್, ಕೆ.ಮರಿದೇವ, ದಾದಾಪೀರ್ ಭಾನುವಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts