More

    ಜನತಾ ಜಲಧಾರೆ ಸಮಾರೋಪಕ್ಕೆ ಮುನ್ನ ತಂದೆ-ತಾಯಿ ಆಶೀರ್ವಾದ ಪಡೆದ ಎಚ್‌ಡಿಕೆ

    ಬೆಂಗಳೂರು: ಹೊರವಲಯದ ನೆಲಮಂಗಲದಲ್ಲಿ ನಡೆಯುತ್ತಿರುವ ಜೆಡಿಎಸ್‌ನ ‘ಜನತಾ ಜಲಧಾರೆ’ ಕಾರ್ಯಕ್ರಮಕ್ಕೆ ಮುನ್ನ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ತಮ್ಮ ತಂದೆ ಹಾಗೂ ತಾಯಿಯ ಆಶೀರ್ವಾದ ಪಡೆದರು.

    ಪದ್ಮನಾಭ ನಗರದಲ್ಲಿ ಇರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ತೆರಳಿದ ಕುಮಾರಸ್ವಾಮಿ ಅಲ್ಲಿ ತಮ್ಮ ತಂದೆ ದೇವೇಗೌಡರ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದರು. ನಂತರ ಪೂಜೆಯಲ್ಲಿ ನಿರತರಾಗಿದ್ದ ತಮ್ಮ ತಾಯಿ ಚನ್ನಮ್ಮ ಅವರಿಗೂ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು.

    ಜನತಾ ಜಲಧಾರೆ ಸಮಾರೋಪಕ್ಕೆ ಮುನ್ನ ತಂದೆ-ತಾಯಿ ಆಶೀರ್ವಾದ ಪಡೆದ ಎಚ್‌ಡಿಕೆ

    ರಾಜ್ಯದ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡುವ ಸಂಕಲ್ಪದೊಂದಿಗೆ ಜೆಡಿಎಸ್ ಹನುಮಜಯಂತಿಯಂದು (ಏ. 16) ಆರಂಭಿಸಿದ ಜನತಾ ಜಲಧಾರೆ ಸರಣಿ ಕಾರ್ಯಕ್ರಮಗಳು ರಾಜ್ಯದ ನಾನಾ ಕಡೆಗಳಲ್ಲಿ ಯಶಸ್ವಿಯಾಗಿ ನಡೆದಿವೆ. ಇಂದು ನೆಲಮಂಗಲದಲ್ಲಿ ಸಮಾರೋಪ ಸಮಾರಂಭ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಬಸ್‌ಗಳಲ್ಲಿ ಮತ್ತು ಇತರ ವಾಹನಗಳಲ್ಲಿ ಕಾರ್ಯಕರ್ತರು ಆಗಮಿಸಿದ್ದಾರೆ.

    ಜನತಾ ಜಲಧಾರೆ ಸಮಾರೋಪಕ್ಕೆ ಮುನ್ನ ತಂದೆ-ತಾಯಿ ಆಶೀರ್ವಾದ ಪಡೆದ ಎಚ್‌ಡಿಕೆ

    ಜೆಡಿಎಸ್‌ನ ‘ಜನತಾ ಜಲಧಾರೆ’ಗೆ ಹರಿದುಬಂದ ಜನಸಾಗರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts