More

    ‘ಕರೊನಾ ವೀ ವಿಲ್ ಕಿಲ್ ಯೂ …’ ಎನ್ನುತ್ತಿದ್ದಾರೆ ಗುರುಕಿರಣ್

    ಕರೋನಾ ವೈರಸ್ ವಿರುದ್ಧ ಜಾಗೃತಿ ಮೂಡಿಸುವುದಕ್ಕೆ ಈಗಾಗಲೇ ಕನ್ನಡ ಚಿತ್ರರಂಗದ ಹಲವು ಗೀತರಚನೆಕಾರರು, ಸಂಗೀತ ನಿರ್ದೇಶಕರು ಮತ್ತು ಗಾಯಕರು ಮುಂದೆ ಬಂದಿದ್ದಾರೆ. ಇದೀಗ ಗಾಯಕ-ಸಂಗೀತ ನಿರ್ದೇಶಕ ಗುರುಕಿರಣ್ ಸಹ ಕರೊನಾ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಒಂದು ಹಾಡು ಮಾಡಿದ್ದಾರೆ.

    ಕಳೆದ ವರ್ಷ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ ‘ಆಯುಷ್ಮಾನ್ ಭವ’ ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಮೂಲಕ ಸೆಂಚ್ಯುರಿ ಬಾರಿಸಿರುವ ಗುರುಕಿರಣ್, ಇದೀಗ ಇನ್ನಷ್ಟು ಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಮಧ್ಯೆ, ‘ದೂರ ದೂರ ಇದ್ರೆ ದೂರ ವೀ ವಿಲ್ ಫೈಟ್ ಯೂ, ಜತೆ ಸೇರಿದ್ರೆ ಇಲ್ಲ ವಿ ಕಾಂಟ್ ಡೂ, ಕರೊನಾ ಕರೊನಾ ಕರೊನಾ ವೀ ವಿಲ್ ಕಿಲ್ ಯೂ …’ ಎಂಬ ಕರೊನಾ ಕುರಿತಾದ ಹಾಡು ಮಾಡಿದ್ದಾರೆ. ಈ ಹಾಡಿಗೆ ಸಂಗೀತ ಸಂಯೋಜಿಸುವುದಷ್ಟೇ ಅಲ್ಲ, ಗಾಯನವೂ ಅವರದ್ದೇ.

    ಇದಕ್ಕೂ ಮುನ್ನ ಕರೋನಾ ವೈರಸ್ ವಿರುದ್ಧ ಜಾಗೃತಿ ಮೂಡಿಸುವುದಕ್ಕೆ ಇತ್ತೀಚೆಗೆ ಜಯಂತ್ ಕಾಯ್ಕಿಣಿ ಒಂದು ಹಾಡು ಬರೆದಿದ್ದರು. ಆ ಹಾಡನ್ನು ಹಿರಿಯ ಗಾಯಕ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸಿದ್ದರು. ಇನ್ನು ಹಂಸಲೇಖ ಅವರು ಸಹ ಕರೋನಾ ಕುರಿತು ಒಂದು ಹಾಡು ರಚಿಸಿದ್ದು, ಅದನ್ನು ಅವರ ಪತ್ನಿ ಲತಾ ಹಂಸಲೇಖ ಮತ್ತು ಮಗಳು ನಂದಿನಿ ಅವರಿಂದ ಹಾಡಿಸಿದ್ದಾರೆ.

    ಬಿಸಿಬಿಸಿ ಪಕೋಡ ಯಾರಿಗ್ ಬೇಕು? … ‘ಅಗ್ನಿಸಾಕ್ಷಿ’ ತಂಡದಿಂದ ಹೀಗೊಂದು ಕಿರುಚಿತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts