ಬೆಳಗಾವಿ: ಕಬ್ಬು ಬೇಸಾಯದೊಂದಿಗೆ ಮಣ್ಣಿನ ಲವತ್ತತೆ ಮತ್ತು ಇಳುವರಿ ಹೆಚ್ಚಿಸಲು ಕಾರ್ಖಾನೆಯವರು ರೈತರಿಗೆ ಹಸಿರೆಲೆ ಗೊಬ್ಬರದ ಬೀಜ ವಿತರಿಸಬೇಕು ಎಂದು ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ.ಆರ್.ಬಿ.ಖಾಂಡಗಾವೆ ಹೇಳಿದರು. ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಕಬ್ಬು ವಿಭಾಗದ ಸಿಬ್ಬಂದಿಗೆ ಕಬ್ಬು ಬೇಸಾಯದಲ್ಲಿ ಪೋಷಕಾಂಶಗಳ ನಿರ್ವಹಣೆ ಮಾಹಿತಿ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಎನ್.ಆರ್.ಯಕ್ಕೇಲಿ, ವಿ.ವಿ.ಅರಳಿಮಟ್ಟಿ, ವಿಷ್ಣುವರ್ಧನ ರೆಡ್ಡಿ, ಗುರುರಾಜ ಜಂಗಮಶೆಟ್ಟಿ, ಡಾ. ಈರೇಶ ಪಾಟೀಲ ಹಾಗೂ 125ಕ್ಕೂ ಹೆಚ್ಚು ವಿವಿಧ ಸಕ್ಕರೆ ಕಾರ್ಖಾನೆಗಳ ಕಬ್ಬು ವಿಭಾಗದ ಸಿಬ್ಬಂದಿ, ಅಧಿಕಾರಿಗಳು ಇದ್ದರು.