More

    ಅನುದಾನ ಬಿಡುಗಡೆಗೆ ಡಿಸಿಎಂಗೆ ಮನವಿ

    ಮುಗಳಖೋಡ: ಸುಕ್ಷೇತ್ರ ಮುಗಳಖೋಡ- ಜಿಡಗಾ ಮಠದ ಪೀಠಾಧ್ಯಕ್ಷ ಡಾ.ಮುರುಘರಾಜೇಂದ್ರ ಸ್ವಾಮೀಜಿ ಅವರನ್ನು ಮಂಗಳವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬೆಳಗಾವಿಯ ಶಾಖಾ ಮಠದಲ್ಲಿ ಭೇಟಿಯಾಗಿ ದರ್ಶನಾಶೀರ್ವಾದ ಪಡೆದರು.

    ಆಳಂದ ಶಾಸಕ ಸಿ.ಆರ್. ಪಾಟೀಲ ಹಾಗೂ ಅಲ್ಲಮಪ್ರಭು ಪಾಟೀಲ ಮಾತನಾಡಿ, ಆಳಂದ ತಾಲೂಕಿನ ಜಿಡಗಾ ಗ್ರಾಮ ಸೇರಿ ಸುತ್ತಮುತ್ತಲಿನ ರೈತರು ಒಣಬೇಸಾಯವನ್ನೇ ಅವಲಂಬಿಸಿದ್ದಾರೆ. ಜಿಡಗಾ ಮಠದಿಂದ 80 ಎಕರೆ ಭೂಮಿ ಕೆರೆ ನಿರ್ಮಾಣಕ್ಕಾಗಿ ಡಾ. ಮುರುಘರಾಜೇಂದ್ರ ಸ್ವಾಮೀಜಿ ಕಾಣಿಕೆಯಾಗಿ ನೀಡಿದ್ದಾರೆ. ಅಲ್ಲದೆ 35 ಎಕರೆ ಜಮೀನು ರೈತರಿಂದ ಖರೀದಿಸಿ 115 ಎಕರೆ ಜಾಗದಲ್ಲಿ ಬೃಹತ್ ಕೆರೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಾಮಗಾರಿ ಕುರಿತ ಕಡತಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದ್ದು, ಆದಷ್ಟು ಬೇಗ ಕಾಮಗಾರಿಗೆ ಅವಶ್ಯಕ ಅನುದಾನ ಬಿಡುಗಡೆಗೊಳಿಸಬೇಕು ಎಂದು ಜಲ ಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಮಾಡಿದರು.

    ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ, ಶಾಸಕರಾದ ಅಜಯಸಿಂಗ್, ಯಶವಂತರಾಯಗೌಡ ಪಾಟೀಲ, ಅಪ್ಪಾಜಿ ನಾಡಗೌಡ, ಅಶೋಕ ಮನಗೂಳಿ, ಎ.ವೈ. ಪಾಟೀಲ, ಎನ್. ಶ್ರೀನಿವಾಸ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts