ನವದೆಹಲಿ: ಆಮದು ಮಾಡಿಕೊಳ್ಳುವ ಮುದ್ರಣ ಕಾಗದದ ಮೇಲಿನ ಸುಂಕವನ್ನು ಶೇ.5ರಷ್ಟು ಕಡಿತಗೊಳಿಸಲು ತೀರ್ಮಾನಿಸಿದ್ದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.
2019ರ ಕೇಂದ್ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಸುದ್ದಿ ಮುದ್ರಣ ಕಾಗದ ಮತ್ತು ಹಗುರವಾದ ಲೇಪಿತ ಕಾಗದಗಳಿಗೆ ಶೇ.10 ಆಮದು ಸುಂಕ ವಿಧಿಸಿತ್ತು. ಈಗ ಅದರಲ್ಲಿ 5 ಪರ್ಸಂಟ್ ಕಡಿತಗೊಳಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
ಮುದ್ರಣ ಕಾಗದಗಳ ಮೇಲಿನ ಶೇ.10ರಷ್ಟು ಸುಂಕದಿಂದ ಮುದ್ರಣ ಮಾಧ್ಯಮಕ್ಕೆ ಹೊರೆಯಾಗುತ್ತಿದೆ ಎಂದು ನನಗೆ ಹಲವು ಮನವಿಗಳು, ಉಲ್ಲೇಖಗಳು ಬಂದಿವೆ. ಹಾಗಾಗಿ ಮುದ್ರಣ ಕಾಗದ ಮತ್ತು ಹಗುರವಾದ ಲೇಪಿತ ಕಾಗದಗಳಿಗೆ ವಿಧಿಸಲಾಗಿರುವ 10 ಪರ್ಸಂಟ್ ಆಮದು ಸುಂಕವನ್ನು ಶೇ.5ಕ್ಕೆ ಕಡಿಮೆಗೊಳಿಸಲಾಗುವುದು ಎಂದಿದ್ದಾರೆ.
ಭಾರತದಲ್ಲಿ ಮುದ್ರಣ ಕಾಗದದ ಪ್ರಮಾಣಿತ ಬಳಕೆ 2.5 ಮಿಲಿಯನ್ ಟನ್ಗಳಾಗಿವೆ. ಆದರೆ ದೇಶೀಯ ಮಿಲ್ಗಳು ಕೇವಲ ಒಂದು ಮಿಲಿಯನ್ ಮುದ್ರಣ ಕಾಗದಗಳನ್ನಷ್ಟೇ ಉತ್ಪಾದಿಸುವ ಸಾಮರ್ಥ್ಯಹೊಂದಿದ್ದು, ಆಮದು ಅನಿವಾರ್ಯವಾಗಿದೆ.(ಪಿಟಿಐ)